ಪ್ರಧಾನಿ ಮೋದಿ 
ದೇಶ

ಬಸವಣ್ಣನವರ ವ್ಯಕ್ತಿತ್ವ ಈಶ್ವರನಂತೆ ವರ್ಣನಾತೀತವಾದದ್ದು: ಪ್ರಧಾನಿ ಮೋದಿ

ಕಾಯಕ ಯೋಗಿ ಬಸವಣ್ಣ ಜಯಂತಿ ಆಚರಣೆ ಹಿನ್ನಲೆ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣನವರ ವ್ಯಕ್ತಿತ್ವ ಈಶ್ವರನಂತೆ ವರ್ಣನಾತೀತವಾದದ್ದು...

ನವದೆಹಲಿ: ಕಾಯಕ ಯೋಗಿ ಬಸವಣ್ಣ ಜಯಂತಿ ಆಚರಣೆ ಹಿನ್ನಲೆ ದೆಹಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣನವರ ವ್ಯಕ್ತಿತ್ವ ಈಶ್ವರನಂತೆ ವರ್ಣನಾತೀತವಾದದ್ದು ಎಂದು ಹೇಳಿದ್ದಾರೆ. 
ದೆಹಲಿಯ ವಿಜ್ಞಾನ ಭವನದಲ್ಲಿ ಬಸವ ಜಯಂತಿ ಆಚರಣೆ ಹಿನ್ನೆಲೆ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಓಂ ಗುರು ಬಸವ ಲಿಂಗಾಯ ನಮಃ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. 
ಎಲ್ಲರಿಗೂ ಬಸವ ಜಯಂತಿಯ ಶುಭಷಾಯ ಕೋರಿದ ಪ್ರಧಾನಿ ಮೋದಿ, ಬಸವಣ್ಣನ ವಚನಗಳು ಜಗತ್ತಿನ ಮೂಲೆ ಮೂಲೆಗೂ ಪಸರಿಸಬೇಕಿದೆ. ಜಗತ್ತಿನ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ಬಗೆ ನಮ್ಮ ದೇಶ ಮುಖ್ಯ ಮಾದರಿಯಾಗಿದೆ. ಭಾರತದ್ದು ಗುಲಾಮಗಿರಿ ಇತಿಹಾಸವಲ್ಲ, ಸೋಲಿನ ಇತಿಹಾಸವಲ್ಲ. ದೇಶದ ಉದ್ಧಾರಕ್ಕಾಗಿ ಬೇರೇ ಬೇರೇ ಸಂದರ್ಭಗಳಲ್ಲಿ ಇಂಥ ಮಹಾನ್ ವ್ಯಕ್ತಿಗಳು ಬರುತ್ತಿರುತ್ತಾರೆ. ಬಸವಣ್ಣನವರು ಈಶ್ವರನ ಹಾಗೆ ಶಕ್ತಿಶಾಲಿ ಹಾಗೂ ಅವಶ್ಯಕ ವಚನವನ್ನು ಹೇಳಿದ್ದಾರೆ. 
ಬಸವಣ್ಣನವರ ಅನುಭವ ಮಂಟಪ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅರ್ಥವನ್ನು ಹೊಂದಿದೆ. 800 ವರ್ಷಗಳ ಹಿಂದೆಯೇ ಜನಸಾಮಾನ್ಯರ ನಡುವೆ ಬದುಕುವ ಕೆಲಸಕ್ಕೆ ಬಸವಣ್ಣನವರು ಅಡಿಪಾಯ ಹಾಕಿದ್ದರು ಎಂದರು. 
ತ್ರಿವಳಿ ತಲಾಖ್ ಬಗ್ಗೆ ಮಾತನಾಡಿದ ಮೋದಿ ಈಗ ಮುಸ್ಲಿಂ ಹೆಣ್ಣುಮಕ್ಕಳು ಅನುಭವಿಸುತ್ತಿರುವ ನೋವುಗಳ ವಿರುದ್ಧ ಹೋರಾಡಲು ಮುಸ್ಲಿಂ ಸಮುದಾಯದಿಂದಲೇ ಜನರು ಮುಂದೆ ಬರುತ್ತಾರೆ. ಅವರ ಸಮಸ್ಯೆಗಳಿಗೆ ಅವರೇ ಪರಿಹಾಸ ಕಂಡುಕೊಳ್ಳುತ್ತಾರೆ. ಇಂಥಾ ವಿಷಯಗಳನ್ನು ನೀವು ರಾಜಕೀಯ ದೃಷ್ಟಿಯಲ್ಲಿ ನೋಡಬೇಡಿ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT