ಸಾಂದರ್ಭಿಕ ಚಿತ್ರ 
ದೇಶ

ಭಾರತ-ಪಾಕ್ ಗಡಿಯಲ್ಲಿ ಮುಂದಿನ ಮಾರ್ಚ್ ವೇಳೆಗೆ ಸ್ಮಾರ್ಟ್ ಬೇಲಿ ಸಿದ್ಧ: ಬಿಎಸ್ಎಫ್ ಡಿಜಿ

ಜಮ್ಮು ವಲಯದ ಪಾಕಿಸ್ತಾನ ಭಾಗದಲ್ಲಿ ಗಡಿಯನ್ನು ಮುಚ್ಚುವುದು ತಕ್ಷಣದ ಆದ್ಯತೆಯಾಗಿದ್ದು ಸ್ಮಾರ್ಟ್...

ನವದೆಹಲಿ: ಜಮ್ಮು ವಲಯದ ಪಾಕಿಸ್ತಾನದ ಭಾಗದಲ್ಲಿ ಗಡಿಯನ್ನು ಮುಚ್ಚುವುದು ತಕ್ಷಣದ ಆದ್ಯತೆಯಾಗಿದ್ದು ಸ್ಮಾರ್ಟ್ ತಂತ್ರಜ್ಞಾನ ಸಹಾಯದ ಬೇಲಿಯನ್ನು ಜಮ್ಮು ವಲಯದ ಉದ್ದಕ್ಕೂ ಮುಂದಿನ ವರ್ಷ ಮಾರ್ಚ್ ವೇಳೆಗೆ ನಿರ್ಮಿಸಲಾಗುವುದು ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
ಭಾರತ ದೇಶದ ಸಂಬಂಧ ಬಾಂಗ್ಲಾದೇಶದೊಂದಿಗೆ ಪ್ರಸ್ತುತ ಉತ್ತಮವಾಗಿದ್ದು, ಇದೇ ರೀತಿಯ ಬೇಲಿಯನ್ನು ಭಾರತ-ಬಾಂಗ್ಲಾ ಗಡಿಯಲ್ಲಿ ಕೂಡ ಸಂಪನ್ಮೂಲ ಸಂಗ್ರಹದ ನಂತರ ನಿರ್ಮಿಸುವ ಯೋಜನೆಯಿದೆ ಎಂದು ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕ ಕೆ.ಕೆ.ಶರ್ಮಾ ತಿಳಿಸಿದರು.
ನನ್ನ ಆದ್ಯತೆ ಪಾಕಿಸ್ತಾನಕ್ಕೆ. ಭಾರತ-ಪಾಕ್ ಗಡಿಭಾಗದಲ್ಲಿ ಏನೇ ಸಂಭವಿಸಿದರೂ ಕೂಡ ಅದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಜಮ್ಮು ವಲಯದಲ್ಲಿ ಸಂಪೂರ್ಣ ಬೇಲಿ ಹಾಕಿ ಅಲ್ಲಿ ಹೆಚ್ಚಿನ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದು ಮಹಾ ನಿರ್ದೇಶಕರು ಹೇಳಿದರು.
ಈ ಯೋಜನೆಯನ್ನು ಮುಂದಿನ ಮಾರ್ಚ್ ವೇಳೆಗೆ ಜಮ್ಮು ವಲಯದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ದುರುದ್ದೇಶಪೂರಿತ' ಪೋಸ್ಟ್‌: ರಾಹುಲ್ ಗಾಂಧಿ ದ್ವಿಪೌರತ್ವ ಪ್ರಕರಣದಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಾಧೀಶ!

ನಾಳೆ ಪ್ರಧಾನಿ ಮೋದಿ ಉದ್ಘಾಟಿಸಬೇಕಿದ್ದ ತೈಲ ಸಂಸ್ಕರಣಾ ಘಟಕದಲ್ಲಿ ಭಾರೀ ಅಗ್ನಿ ಅವಘಡ!

ಎಲ್ಲಾ ಬರೀ ಡ್ರಾಮಾ: ಪ್ರಧಾನಿ ಮೋದಿ 'Jhalmuri' ಖರೀದಿ ಕುರಿತು Mamata Banerjee ಕೆಂಡ!

ಶ್ರೀಲಂಕಾ ಕ್ರಿಕೆಟಿಗ ದಾಸುನ್ ಶಾನಕಗೆ ಶಾಕ್, ಒಂದು ವರ್ಷ ನಿಷೇಧ!

ಬಸ್‌ನಲ್ಲಿ ನಿಧಾನಕ್ಕೆ ಕೈ ಹಾಕಿದ, ಸುಮ್ನೆ ಬಿಡ್ತಿನಾ?: ಕಹಿ ಅನುಭವ ಬಿಚ್ಚಿಟ್ಟ Bigg Boss ರಿಷಾ ಗೌಡ

SCROLL FOR NEXT