ಸಾಂದರ್ಭಿಕ ಚಿತ್ರ 
ದೇಶ

ಭಾರತ-ಪಾಕ್ ಗಡಿಯಲ್ಲಿ ಮುಂದಿನ ಮಾರ್ಚ್ ವೇಳೆಗೆ ಸ್ಮಾರ್ಟ್ ಬೇಲಿ ಸಿದ್ಧ: ಬಿಎಸ್ಎಫ್ ಡಿಜಿ

ಜಮ್ಮು ವಲಯದ ಪಾಕಿಸ್ತಾನ ಭಾಗದಲ್ಲಿ ಗಡಿಯನ್ನು ಮುಚ್ಚುವುದು ತಕ್ಷಣದ ಆದ್ಯತೆಯಾಗಿದ್ದು ಸ್ಮಾರ್ಟ್...

ನವದೆಹಲಿ: ಜಮ್ಮು ವಲಯದ ಪಾಕಿಸ್ತಾನದ ಭಾಗದಲ್ಲಿ ಗಡಿಯನ್ನು ಮುಚ್ಚುವುದು ತಕ್ಷಣದ ಆದ್ಯತೆಯಾಗಿದ್ದು ಸ್ಮಾರ್ಟ್ ತಂತ್ರಜ್ಞಾನ ಸಹಾಯದ ಬೇಲಿಯನ್ನು ಜಮ್ಮು ವಲಯದ ಉದ್ದಕ್ಕೂ ಮುಂದಿನ ವರ್ಷ ಮಾರ್ಚ್ ವೇಳೆಗೆ ನಿರ್ಮಿಸಲಾಗುವುದು ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
ಭಾರತ ದೇಶದ ಸಂಬಂಧ ಬಾಂಗ್ಲಾದೇಶದೊಂದಿಗೆ ಪ್ರಸ್ತುತ ಉತ್ತಮವಾಗಿದ್ದು, ಇದೇ ರೀತಿಯ ಬೇಲಿಯನ್ನು ಭಾರತ-ಬಾಂಗ್ಲಾ ಗಡಿಯಲ್ಲಿ ಕೂಡ ಸಂಪನ್ಮೂಲ ಸಂಗ್ರಹದ ನಂತರ ನಿರ್ಮಿಸುವ ಯೋಜನೆಯಿದೆ ಎಂದು ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕ ಕೆ.ಕೆ.ಶರ್ಮಾ ತಿಳಿಸಿದರು.
ನನ್ನ ಆದ್ಯತೆ ಪಾಕಿಸ್ತಾನಕ್ಕೆ. ಭಾರತ-ಪಾಕ್ ಗಡಿಭಾಗದಲ್ಲಿ ಏನೇ ಸಂಭವಿಸಿದರೂ ಕೂಡ ಅದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಜಮ್ಮು ವಲಯದಲ್ಲಿ ಸಂಪೂರ್ಣ ಬೇಲಿ ಹಾಕಿ ಅಲ್ಲಿ ಹೆಚ್ಚಿನ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದು ಮಹಾ ನಿರ್ದೇಶಕರು ಹೇಳಿದರು.
ಈ ಯೋಜನೆಯನ್ನು ಮುಂದಿನ ಮಾರ್ಚ್ ವೇಳೆಗೆ ಜಮ್ಮು ವಲಯದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

ದೂರು ನೀಡಲು ಕ್ಯೂಆರ್ ಕೋಡ್ ಬಿಡುಗಡೆ; ಹೋಟೆಲ್‌ಗಳ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ, ಪಿಜಿ ಗಳಿಗೆ ಪ್ರತ್ಯೇಕ ಗೈಡ್‌ಲೈನ್ಸ್‌: ಖಾದರ್ ಮಹತ್ವದ ಘೋಷಣೆ

Rahul Gandhi ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬ್ರೇಕ್! ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಯುರೋಪ್‌ನಲ್ಲಿ ಯುದ್ಧದ ಭೀತಿ: ಉಕ್ರೇನ್‌ನಲ್ಲಿರುವ ಭಾರತದ ಬಿಲಿಯನೇರ್‌ ಉದ್ಯಮಿಯ ಕಾರ್ಖಾನೆ ಮೇಲೆ ರಷ್ಯಾ ದಾಳಿ!

ಹನೂರು ಶೂಟೌಟ್ ಪ್ರಕರಣ: ಮೃತರ ಕುಟುಂಬಸ್ಥರಿಗೆ 15 ಲಕ್ಷ ರೂ. ಪರಿಹಾರ ವಿತರಣೆ, ಪ್ರತಿಭಟನೆ ವಾಪಸ್