ದೇಶ

ಹರ್ಯಾಣದಲ್ಲಿ ಕುದುರೆಯನ್ನು ಉಸಿರುಗಟ್ಟಿಸಿ ನಿರ್ದಯವಾಗಿ ಕೊಂದ ಜನ: ವಿಡಿಯೋ ವೈರಲ್

Shilpa D
ಜಿಂದ್ : ಕುದುರೆಯೊಂದನ್ನು ಹಗ್ಗದಿಂದ ಬಿಗಿದು, ನಿರ್ದಯವಾಗಿ ಹೊಡೆದು ಉಸಿರುಗಟ್ಟಿಸಿ ಸಾಯಿಸಲಾದ ಅಮಾನುಷ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. 
ಈ ಅಮಾನುಷ ಕೃತ್ಯವು ಹರಿಯಾಣದ ಜಿಂದ್‌ ಪ್ರದೇಶದ ಗೊಹಾನಾ ರಸ್ತೆ ಸಮೀಪದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹತ್ತು ಜನರ ಮೇಲೆ ಮೂಕ ಪ್ರಾಣಿಯ ಮೇಲೆ ನಡೆಸಿದ ಅಮಾನುಷ ಕೃತ್ಯಕ್ಕಾಗಿ ಪೊಲೀಸರು ಕೇಸ್‌ ಬುಕ್‌ ಮಾಡಿದ್ದಾರೆ.
ಕುದುರೆಯ ಕಾಲುಗಳನ್ನು ಹಗ್ಗದಲ್ಲಿ ಬಿಗಿದು, ಅದನ್ನು ಎಲ್ಲ ದಿಕ್ಕುಗಳಿಂದ ಎಳೆದಾಡಿ, ದೊಣ್ಣೆಗಳಿಂದ ಹೊಡೆದು ಹಿಂಸಿಸಿದ್ದು. ಅದರ ಕುತ್ತಿಗೆಯನ್ನೂ ಹಗ್ಗದಲ್ಲಿ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದಾರೆ.
ಎಎಸ್‌ಐ ರಾಜೀಂದರ್‌ ಕುಮಾರ್‌ ಮತ್ತು ವಿಶೇಷ ರಕ್ಷಣಾಧಿಕಾರಿ ಸುಭಾಶ್‌ ಎಂಬವರು ಕೃತ್ಯದಲ್ಲಿ ಭಾಗಿಯಾಗಿದ್ದು, ಈ ಸಂಬಂಧ ತನಿಖೆಗೆ ಆಗ್ರಹಿಸಲಾಗಿದೆ.  
SCROLL FOR NEXT