ಸಾಂದರ್ಭಿಕ ಚಿತ್ರ 
ದೇಶ

ರಿಯಾದ್ ನಲ್ಲಿ ಭಾರತೀಯ ಮಹಿಳೆಗೆ ಲೈಂಗಿಕ ಕಿರುಕುಳ, ಸುಷ್ಮಾ ಮೊರೆ ಹೋದ ಸಂತ್ರಸ್ತೆಯ ಸಹೋದರಿ

ಕೆಲಸಕ್ಕಾಗಿ ರಿಯಾದ್ ಗೆ ತೆರಳಿದ್ದ ತಮ್ಮ ಸಹೋದರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದ್ದು, ದಯಮಾಡಿ ಆಕೆಯನ್ನು ರಕ್ಷಿಸಿ ಎಂದು ಹೈದರಾಬಾದ್ ಮೂಲದ ಕುಟುಂಬವೊಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದೆ.

ಹೈದರಾಬಾದ್: ಕೆಲಸಕ್ಕಾಗಿ ರಿಯಾದ್ ಗೆ ತೆರಳಿದ್ದ ತಮ್ಮ ಸಹೋದರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದ್ದು, ದಯಮಾಡಿ ಆಕೆಯನ್ನು ರಕ್ಷಿಸಿ ಎಂದು ಹೈದರಾಬಾದ್ ಮೂಲದ ಕುಟುಂಬವೊಂದು ಕೇಂದ್ರ ವಿದೇಶಾಂಗ ಸಚಿವೆ  ಸುಷ್ಮಾ ಸ್ವರಾಜ್ ಅವರಿಗೆ ಮನವಿ  ಮಾಡಿದೆ.

ಸುದ್ದಿಸಂಸ್ಥೆಯ ವರದಿಯಂತೆ ಹೈದರಾಬಾದ್ ನಿವಾಸಿಯಾದ ಹುಮೇರಾ ಎಂಬಾಕೆಯನ್ನು ಏಜೆಂಟ್ ಓರ್ವ ರಿಯಾದ್ ನಲ್ಲಿ ಉತ್ತಮ ಕೆಲಸ ಕೊಡಿಸುವುದಾಗಿ ಸುಳ್ಳು ಭರವಸೆಗಳನ್ನು ನೀಡಿ ಕರೆದೊಯ್ದಿದ್ದ, ಇದೀಗ ಆಕೆಗೆ ಅಲ್ಲಿ  ಸಹೋದ್ಯೋಗಿಗಳೇ ಲೈಂಕಿಗ ಕಿರುಕುಳ ನೀಡುತ್ತಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿದ್ದು, ಆಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ  ಆಕೆಯನ್ನು ರಕ್ಷಿಸುವಂತೆ ಹುಮೇರಾ ಸಹೋದರಿ ರೇಶ್ಮಾ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದಾರೆ.

ರೇಶ್ಮಾ ಹೇಳಿರುವಂತೆ ಹುಮೇರಾಗೆ ಏಜೆಂಟ್ ಮುಸ್ಲಿಮರ ಪವಿತ್ರಾ ಉಮ್ರಾ ಮಾಡುವ ಅವಕಾಶ ಕಲ್ಪಿಸುವುದಾಗಿ ಏಜೆಂಟ್ ಆಶ್ವಾಸನೆ ನೀಡಿದ್ದನಂತೆ. ಹೀಗಾಗಿ ಹುಮೇರಾ ರಿಯಾದ್ ನಲ್ಲಿದ್ದುಕೊಂಡು ಯಾವುದಾದರು ಸಣ್ಣ  ಕುಟುಂಬದಲ್ಲಿ ಕೆಲಸ ಮಾಡಿಕೊಂಡು ಅದರಿಂದ ಬಂದ ಸಂಪಾದನೆಯಲ್ಲಿ ಉಮ್ರಾ ಸೇವೆ ಮಾಡುವ ಆಸೆಯಿಂದ ರಿಯಾದ್ ಗೆ ತೆರಳಲು ಒಪ್ಪಿಗೆ ನೀಡಿದ್ದಳು. ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ದಯಮಾಡಿ ಆಕೆಯನ್ನು ರಕ್ಷಿಸಿ  ಎಂದು ಸಹೋದರಿ ರೇಶ್ಮಾ ಮನವಿ ಮಾಡಿದ್ದಾರೆ.

ರೇಶ್ಮಾ ಮೊದಲು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದು, ಅವರಿಂದ ಸೂಕ್ತ ರೀತಿಯ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ನೇರ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕುಟುಂಬದವರನ್ನು  ಸಂಪರ್ಕಿಸಿದ್ದ ಹುಮೇರಾ ತಮ್ಮ ನರಳಾಟವನ್ನು ಹೇಳಿಕೊಂಡಿದ್ದರಂತೆ. ಇದೀಗ ಈ ಕುಟುಂಬ ಸುಷ್ಮಾ ಅವರ ನೆರವಿಗಾಗಿ ಹಾತೊರೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT