ಸಂಗ್ರಹ ಚಿತ್ರ 
ದೇಶ

50 ಲಕ್ಷ ಇನ್ಶೂರೆನ್ಸ್ ಹಣಕ್ಕಾಗಿ ಸಹೋದರಿಯನ್ನೇ ಹತ್ಯೆಗೈದ ಸಹೋದರ

50 ಲಕ್ಷ ಇನ್ಶೂರೆನ್ಸ್ ಹಣ ಮತ್ತು ಆಸ್ತಿಗಾಗಿ ಸ್ವಂತ ಸಹೋದರಿಯನ್ನೇ ಸಹೋದರ ಹತ್ಯೆ ಮಾಡಿರುವ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ...

ನವದೆಹಲಿ: 50 ಲಕ್ಷ ಇನ್ಶೂರೆನ್ಸ್ ಹಣ ಮತ್ತು ಆಸ್ತಿಗಾಗಿ ಸ್ವಂತ ಸಹೋದರಿಯನ್ನೇ ಸಹೋದರ ಹತ್ಯೆ ಮಾಡಿರುವ ಘಟನೆ ಉತ್ತರ ದೆಹಲಿಯಲ್ಲಿ ನಡೆದಿದೆ. 
ರಕ್ಷಾಬಂಧನ ಉಡುಗೊರೆ ಎಂದು ಸಹೋದರಿ 45 ವರ್ಷದ ಅನಿತಾ ಅವರ ಹೆಸರಲ್ಲಿ 50 ಲಕ್ಷಕ್ಕೆ ಇನ್ಶೂರೆನ್ಸ್ ಮಾಡಿದ್ದ ಆರೋಪಿ ಕಮಲ್ ಆ ಹಣಕ್ಕಾಗಿ ಸಹೋದರಿಯನ್ನೇ ಕೊಂದು ಆರೋಪವನ್ನು ಸಹೋದರಿಯ ಗಂಡನ ಮೇಲೆ ಬರುವಂತೆ ಯೋಜನೆ ರೂಪಿಸಿದ್ದ ಆದರೆ ಪೊಲೀಸರ ತನಿಖೆ ವೇಳೆ ಕಮಲ್ ತಾನು ಮಾಡಿರುವ ಹೀನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.
ಎಸಿಪಿ ಅಶೋಕ್ ತ್ಯಾಗಿ ಮತ್ತು ಎಸ್ಎಚ್ಒ ಮನೋಜ್ ಕುಮಾರ್ ನೇತೃತ್ವದಲ್ಲಿ ನಡೆದ ತನಿಖೆ ವೇಳೆ ಕಮಲ್ ತಾನು ಸಹೋದರಿಯ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಮಲ್ ಎರಡು ಮದುವೆಯಾಗಿದ್ದು ಮೊದಲ ಪತ್ನಿಗೆ ಐವರು ಗಂಡು ಮಕ್ಕಳು ಇದರಲ್ಲಿ ಇಬ್ಬರಿಗೆ ಮದುವೆಯಾಗಿದೆ. ಇನ್ನು ಕಮಲ್ 2016ರಲ್ಲಿ ಮೂರು ಮಕ್ಕಳ ತಾಯಿಯನ್ನು ಮದುವೆಯಾಗಿದ್ದಾನೆ. 
ಕುಟುಂಬ ದೊಡ್ಡದಾಗಿದ್ದರಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕಮಲ್ ಗೆ ಪರಿಸ್ಥಿತಿ ಇಕ್ಕಟ್ಟಾಗಿದೆ. ಆಗ ಆತನ ಕಣ್ಣು ಬಿದ್ದಿದ್ದು ಸಹೋದರಿಯ ಸ್ವಂತ ಆಸ್ತಿ ಮೇಲೆ. ಅನಿಲ್ ಅವರಿಗೆ ಎರಡು ಮನೆಯಿತ್ತು. ಒಂದರಲ್ಲಿ ಅನಿತ ಮತ್ತು ಆತನ ಪತ್ನಿ ವಾಸವಾಗಿದ್ದರು. ಇನ್ನೊಂದು ಮನೆಯಲ್ಲಿ ಕಮಲ್ ರ ಮದುವೆಯಾಗಿದ್ದ ಹಿರಿಯರಿಬ್ಬರು ಮಕ್ಕಳು ವಾಸವಾಗಿದ್ದರು. 
ಕೊಲೆ ಮಾಡಿದ ದಿನ ಕಮಲ್ ಸಹೋದರಿಯ ಮನೆಯಲ್ಲಿ ಮಲಗಿಕೊಳ್ಳಲು ತೆರಳಿದ್ದಾನೆ. ಈ ವೇಳೆ ಅನಿತ ಕೋಣೆಯಲ್ಲಿ ಒಬ್ಬಳೆ ಮಲಗಿರುವುದನ್ನು ಗಮನಿಸಿ ನಂತರ ತನ್ನ ಎರಡನೇ ಹೆಂಡತಿಯ ಮಕ್ಕಳಾದ ಚಂದನ್ ಮತ್ತು ಕುಂದನ್ ನನ್ನು ಕರೆದುಕೊಂಡು ಕತ್ತು ಕೂಯ್ದು ಹತ್ಯೆ ಮಾಡಿ ಹೊರಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT