ನವದೆಹಲಿ: ಇತ್ತೀಚಿನ ಸರಣಿ ಅಪಘಾತಗಳ ನಂತರ ರೈಲ್ವೆ ಬಗ್ಗೆ ಜನರ ಗ್ರಹಿಕೆ ಬದಲಾಗಿದ್ದು, ಇದರಿಂದ ಇಲಾಖೆಗೆ ತೀವ್ರ ಹಿನ್ನಡೆಯಾಗಿದೆ ಎಂದು ರೈಲ್ವೆ ಮಂಡಳಿ ನೂತನ ಅಧ್ಯಕ್ಷ ಅಶ್ವನಿ ಲೊಹನಿ ಹೇಳಿದ್ದಾರೆ.
ರೈಲ್ವೆ ಮಂಡಳಿ ಹೊರಡಿಸಿರುವ ಪ್ರಕಟಣೆಯಲ್ಲಿ, ಇಲಾಖೆಯ ನ್ಯೂನತೆ ಮತ್ತು ವ್ಯವಸ್ಥೆ ಬಗ್ಗೆ ಆಳವಾಗಿ ಆತ್ಮಾವಲೋಕನ ಮಾಡುವ ಸಮಯ ಇದಾಗಿದ್ದು ಮುಂದಿನ ದಿನಗಳಲ್ಲಿ ಈ ರೀತಿ ಅನಾಹುತಗಳಾಗದಂತೆ ದೀರ್ಘಾವಧಿಯ ಪರಿಹಾರ ಹುಡುಕಬೇಕು ಎಂದು ರೈಲ್ವೆ ಉತ್ತರ ವಿಭಾಗದ ಕಿರಿಯ ಅಧಿಕಾರಿಗಳಿಗೆ ಲೊಹಣಿ ಸೂಚಿಸಿದ್ದಾರೆ ಎಂದು ಹೇಳಿದೆ.
ಇತ್ತೀಚಿನ ಸರಣಿ ಅಪಘಾತಗಳಿಂದ ರೈಲ್ವೆ ಇಲಾಖೆಯ ಕುರಿತು ಜನರ ಭಾವನೆ ಬದಲಾಗುತ್ತಿದೆ. ಇದು ಇಲಾಖೆಗೆ ತೀವ್ರ ನಷ್ಟವಾಗಿದೆ ಎಂದು ಲೊಹನಿ ಹೇಳಿದ್ದಾರೆ.