ರಾಜೇಶ್‌ ಗುಲಾಟಿ ಮತ್ತು ಅನುಪಮಾ 
ದೇಶ

ಅನುಪಮ ಗುಲಾಟಿ ಕೊಲೆ ಪ್ರಕರಣ: ಪತಿ ರಾಜೇಶ್ ಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ

36 ವರ್ಷದ ಹೆಂಡತಿಯನ್ನು ಉಸಿರುಕಟ್ಟಿಸಿ ಕೊಂದು ನಂತರ ಅವಳ ದೇಹವನ್ನು ಎಲೆಕ್ಟ್ರಿಕ್‌ ಸಾ ಬಳಸಿ 70 ತುಂಡುಗಳನ್ನಾಗಿ ಮಾಡಿ ಫ್ರೀಜರ್‌ನಲ್ಲಿಟ್ಟಿದ್ದ ದೋಷಿ ರಾಜೇಶ್‌ ಗುಲಾಟಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ.

ಡೆಹರಾಡೂನ್: 36 ವರ್ಷದ ಹೆಂಡತಿಯನ್ನು ಉಸಿರುಕಟ್ಟಿಸಿ ಕೊಂದು ನಂತರ ಅವಳ ದೇಹವನ್ನು ಎಲೆಕ್ಟ್ರಿಕ್‌ ಸಾ ಬಳಸಿ 70 ತುಂಡುಗಳನ್ನಾಗಿ  ಮಾಡಿ ಫ್ರೀಜರ್‌ನಲ್ಲಿಟ್ಟಿದ್ದ ದೋಷಿ ರಾಜೇಶ್‌ ಗುಲಾಟಿಗೆ ಇಂದು ಶಿಕ್ಷೆ ಪ್ರಕಟವಾಗಲಿದೆ.
2010ರಲ್ಲಿ ನಡೆದ ಈ ಕ್ರೂರ ಕೊಲೆ ಕಂಡು ಡೆಹರಾಡೂನ್ ಬೆಚ್ಚಿ ಬಿದ್ದಿತ್ತು. ಈ ಕೊಲೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು ಭಾರತೀಯ ದಂಡ ಸಂಹಿತೆ 302(ಕೊಲೆ) ಹಾಗೂ 201(ಸಾಕ್ಷಿಯನ್ನು ನಾಶ ಪಡಿಸಲು ಯತ್ನಿಸಿದ್ದು) ಪ್ರಕಾರ ರಾಜೇಶ್‌ ದೋಷಿ ಎಂದಿರುವ ಕೋರ್ಟ್ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
 ದೂರುದಾರ ಸುಜನ್ ಪ್ರಧಾನ್ ಅವರ ಸಲಹಾಕಾರ ಎಸ್.ಕೆ ಮೊಹಂತಿ, "ಶಿಕ್ಷೆಗೆ ಸಂಬಂಧಿಸಿದಂತೆ ಶುಕ್ರವಾರ ವಾದಗಳು ನಡೆಯುತ್ತವೆ, ನಂತರ ರಾಜೇಶ್ ಗುಲಾಟಿಗೆ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಲಾಗುತ್ತದೆ." ಎಂದು ತಿಳಿಸಿದ್ದಾರೆ.
1999ರಲ್ಲಿ ರಾಜೇಶ್ ಹಾಗೂ ಅನುಪಮ ಮದುವೆಯಾಗಿದ್ದರು. ಮದುವೆಯಾದ ಬಳಿಕ ಕೆಲ ವರ್ಷಗಳ ಕಾಲ ಅಮೇರಿಕದಲ್ಲಿ ನೆಲೆಸಿದ್ದ ದಂಪತಿ ನಂತರ ಭಾರತಕ್ಕೆ ವಾಪಸಾಗಿದ್ದರು. ಭಾರತಕ್ಕೆ ಬಂದ ಮೇಲೆ ರಾಜೇಶ್‌ಗೆ ಕೋಲ್ಕೊತ್ತಾದ ಯುವತಿಯೊಬ್ಬಳ ಜತೆ ಸಂಬಂಧವಿದೆಯೆಂದು ಆತನ ಪತ್ನಿ ಜಗಳವಾಡಿದ್ದಳು.
ಅಕ್ಟೋಬರ್‌ 17 ರಂದು ರಾಜೇಶ್‌ ಹಾಗೂ ಆತನ ಪತ್ನಿ ನಡುವೆ ಮಾತಿಗೆ ಮಾತು ಬೆಳೆದು ಕೋಪದಿಂದ ರಾಜೇಶ್‌ ಪತ್ನಿಗೆ ಹೊಡೆಯುತ್ತಾನೆ. ಆ ಏಟಿನ ರಭಸಕ್ಕೆ ಆಕೆಯ ತಲೆ ಗೋಡೆಗೆ ತಗುಲಿ ಪ್ರಜ್ಞೆ ತಪ್ಪಿ ಬೀಳುತ್ತಾಳೆ. ಆಗ  ಆಕೆಯ ಬಾಯಿ, ಮೂಗಿಗೆ ಹತ್ತಿಯನ್ನು ತುರುಕಿ ನಂತರ ದಿಂಬಿನಿಂದ ಉಸಿರುಕಟ್ಟಿಸಿ ಸಾಯಿಸುತ್ತಾನೆ.
ನಂತರ ಮಾರುಕಟ್ಟೆಗೆ ಹೋಗಿ ಎಲೆಕ್ಟ್ರಿಕ್‌ ಸಾ ತಂದು ಆಕೆಯ ದೇಹವನ್ನು 70 ತುಂಡುಗಳಾಗಿ ಕತ್ತರಿಸಿ, ಪಾಲಿಥೀನ್‌ ಚೀಲದಲ್ಲಿ ತುಂಬಿ ಫ್ರೀಜರ್‌ನಲ್ಲಿ ಇಟ್ಟು ಬಿಡುತ್ತಾನೆ. ಅಷ್ಟೇ ಅಲ್ಲದೆ ಪ್ರತಿದಿನವೂ ದೇಹದ ಒಂದೊಂದು ಭಾಗವನ್ನು ಕವರ್‌ನಲ್ಲಿ ತುಂಬಿ ಬೇರೆ-ಬೇರೆ ಕಡೆ ಎಸೆದು ಬರುತ್ತಿದ್ದ.
ರಾಜೇಶ್ ತನ್ನ ಮಕ್ಕಳಿಗೆ ತಾಯಿ ದೆಹಲಿಯಲ್ಲಿರುವ ಅಜ್ಜಿ ಮನೆಗೆ ಹೋಗಿದ್ದಾಳೆ ಎಂದು ಹೇಳಿದ್ದ. 
ಒಮ್ಮೆ ಅನುಪಮಾಳ ಸಹೋದರ ತಂಗಿಯ ಮನೆಗೆ ಬಂದಾಗ ಆತನನ್ನು ಒಳಕ್ಕೂ ಬರಲು ಬಿಡದೆ ಜಗಳವಾಡಿದ್ದ ರಾಜೇಶ್‌ ವರ್ತನೆ ನೋಡಿ ಆತ ತಂಗಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ.
ಆಕೆ ಏನಾದಳು ಎಂದು ವಿಚಾರಿಸಿದಾಗ ಈ ಭಯಾನಕ ಕೊಲೆ ಬೆಳಕಿಗೆ ಬಂದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT