ಬಾಬ್ರಿ ಮಸೀದಿ 
ದೇಶ

ಬಾಬ್ರಿ ಮಸೀದಿ ಧ್ವಂಸಗೊಂಡು ಇಂದಿಗೆ 25 ವರ್ಷ

ರಾಮಜನ್ಮಭೂಮಿ ವಿವಾದ ಹಲವು ದಶಕಗಳಿಗೆ ಬಗೆಹರಿಯದೇ ಹಾಗೆಯೇ ಉಳಿದಿದೆ. ಅನೇಕ ಬಾರಿ ರಾಮಮಂದಿರಕ್ಕಾಗಿ......

ರಾಮಜನ್ಮಭೂಮಿ ವಿವಾದ ಹಲವು ದಶಕಗಳಿಗೆ ಬಗೆಹರಿಯದೇ ಹಾಗೆಯೇ ಉಳಿದಿದೆ. ಅನೇಕ ಬಾರಿ ರಾಮಮಂದಿರಕ್ಕಾಗಿ ಚಳುವಳಿಗಳು ತೀವ್ರಗೊಂಡಿದ್ದು, ಶ್ರೀರಾಮ ಜನ್ಮಿಸಿದ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು ಎನ್ನಲಾದ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ಘಟನೆ ನಡೆದು ಇಂದಿಗೆ 25 ವರ್ಷಗಳು.
1992, ಡಿ.06 ರಂದು ಕರಸೇವಕರ ಆಕ್ರೋಶಕ್ಕೆ ಬಾಬ್ರಿ ಮಸೀದಿ ಗುರಿಯಾಗಿ ಧ್ವಂಸಗೊಂಡ ದಿನ. ಏಕ್ ಧಕ್ಕಾ ಔರ್ ದೋ, "ಬಾಬ್ರಿ ಮಸ್ಜೀದ್ ತೋಡ್ ದೋ" ಎಂಬ ಘೋಷಣೆಯೊಂದಿಗೆ ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. 1990 ರಿಂದ ರಾಮಜನ್ಮಭೂಮಿ ಚಳುವಳಿ ಕಾವು ಪಡೆದುಕೊಂಡಿತ್ತು. ಆರ್ ಎಸ್ ಎಸ್ ಹಾಗೂ ವಿಹೆಚ್ ಪಿ ಮುಖಂಡರ ನೇತೃತ್ವದಲ್ಲಿ ರಾಮ ಜನ್ಮಭೂಮಿಗಾಗಿ ನಿರಂತರ ಹೋರಾಟ ನಡೆದಿದ್ದು, ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ 1992 ರಲ್ಲಿ ನಡೆದಿದ್ದ ಘಟನೆ ರಾಮಜನ್ಮಭೂಮಿ ಪ್ರಕರಣಕ್ಕೆ ಹಾಗೂ ದೇಶದ ರಾಜಕಾರಣದಲ್ಲಿ ದೊಡ್ಡ ಮಟ್ಟದ ತಿರುವು ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT