ಲಖನೌ: ಉತ್ತಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ವರಿಸುವ ಮೂಲಕ ಸರ್ಕಾರದ ಗಮನವನ್ನು ತಮ್ಮತ್ತ ಸೆಳೆಯಲು ಅಂಗನವಾಡಿ ಕಾರ್ಯಕರ್ತೆಯೊಬ್ಬರು ವಿಶಿಷ್ಟವಾಗಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಉತ್ತರಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಆದಿತ್ಯನಾಥ ಅವರ ಸರ್ಕಾರಕ್ಕೆ ನಾಲ್ಕು ತಿಂಗಳ ಗಡುವು ನೀಡಿದ್ದರು. ಆದರೆ ಅಧಿಕಾರಿಕ್ಕೆ ಬಂದು ಎಂಟು ತಿಂಗಳು ಕಳೆದರು ತಮ್ಮ ಬೇಡಿಕೆಗಳು ಈಡೇರದಿದ್ದರಿಂದ ಅಂಗನವಾಡಿ ಕಾರ್ಯಕರ್ತೆಯರೂ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸೀತಾಪುರದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ವರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಫೋಟೋಗೆ ಹಾರ ಹಾಕಿ ವಧುವಾಗಿ ಅವರನ್ನು ವರಿಸಿದಳು. ನೆರದ ಅಂಗನವಾಡಿ ಕಾರ್ಯಕರ್ತೆಯರು ಮದುವೆ ಶುಭ ಮುಹೂರ್ತದಲ್ಲಿ ವೇದ ಮಂತ್ರ ಘೋಷಗೈದ ಗಟ್ಟಿ ಮೇಳ ಬಾರಿಸಿದರು.
ನಮ್ಮ ಬೇಡಿಕೆಗಳನ್ನು ಪತಿರಾಯ ಸಿಎಂ ಯೋಗಿ ಅವರು ಈಡೇರಿಸದಿದ್ದರೆ ನಾನು ಕುದುರೆಯೇರಿ ರಾಜಧಾನಿಗೆ ಹೋಗಿ ಪತಿರಾಯರನ್ನು ನೇರವಾಗಿ ಕಾಣುತ್ತೇನೆ ಎಂದು ಸೀತಾಪುರದ ಸಿಎಂ ವಿವಾಹಿತ ಅಂಗನವಾಡಿ ಕಾರ್ಯಕರ್ತೆ ಮಹಿಳಾ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷೆ ನೀತು ಸಿಂಗ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos