ಭದ್ರತಾ ಪಡೆ ಯೋಧರು 
ದೇಶ

ಪೆಲೆಟ್ ಗನ್ ಶೂಟ್ ಸಂತ್ರಸ್ತರ ಡಾಕ್ಯುಮೆಂಟರಿ: ಫ್ರೆಂಚ್ ಪತ್ರಕರ್ತನ ಬಂಧನ

ಪೆಲೆಟ್ ಗನ್ ಹೊಡೆತದ ಸಂತ್ರಸ್ತರ ಕುರಿತಾದ ಡಾಕ್ಯುಮೆಂಟರಿ ತಯಾರಿಸುತ್ತಿದ್ದ ಫ್ರೆಂಚ್ ಪತ್ರಕರ್ತನನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ...

ಶ್ರೀನಗರ: ಪೆಲೆಟ್ ಗನ್ ಹೊಡೆತದ ಸಂತ್ರಸ್ತರ ಕುರಿತಾದ ಡಾಕ್ಯುಮೆಂಟರಿ ತಯಾರಿಸುತ್ತಿದ್ದ ಫ್ರೆಂಚ್ ಪತ್ರಕರ್ತನನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಂಧಿಸಿದ್ದಾರೆ. 
ವೀಸಾ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಫ್ರೆಂಚ್ ಪತ್ರಕರ್ತ ಕಾಮಿತಿ ಪೌಲ್ ಎಡ್ವರ್ಡ್ ನನ್ನು ಭಾನುವಾರ ಸಂಜೆ ಕೋತಿಬಾಗ್ ನಲ್ಲಿ ಬಂಧಿಸಲಾಗಿದೆ. 
ಪೌಲ್ ಎಡ್ವರ್ಡ್ ಶ್ರೀನಗರದಲ್ಲಿ ಪ್ರತ್ಯೇಕತವಾದಿಗಳು ಮತ್ತು ಪೆಲೆಟ್ ಗುಂಡೇಟಿನ ಸಂತ್ರಸ್ತರ ಭೇಟಿ ಮಾಡಿ ಡಾಕ್ಯುಮೆಂಟರಿ ತಯಾರಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
2016ರ ಜುಲೈ 8ರಂದು ಹಿಜ್ಬುಲ್ ಕಮಾಂಡರ್ ಬುಹ್ರಾನ್ ವಾನಿ ಹತ್ಯೆಯನ್ನು ಖಂಡಿಸಿ ಪ್ರತ್ಯೇಕತವಾದಿಗಳು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಗುಂಪನ್ನು ಚದುರಿಸಲು ಭದ್ರತಾ ಪಡೆ ಯೋಧರು ಪೆಲೆಟ್ ಗನ್ ನಿಂದ ಗುಂಡು ಹಾರಿಸಿದ್ದರು. ಇದರಲ್ಲಿ ಹಲವು ಗಂಭೀರವಾಗಿ ಗಾಯಗೊಂಡಿದ್ದರು. 
ಎಡ್ವರ್ಡ್ 2018ರ ಡಿಸೆಂಬರ್ 22ರವರೆಗೆ ಬಿಸಿನೆಸ್ ವೀಸಾ ಮೇಲೆ ಭಾರತಕ್ಕೆ ಆಗಮಿಸಿದ್ದರು. ಆದರೆ ಬಿಸಿನೆಸ್ ವೀಸಾ ಮೇಲೆ ಬಂದವರು ರಾಜಕೀಯ ಮತ್ತು ಭದ್ರತೆ ಕುರಿತಾದ ಡಾಕ್ಯುಮೆಂಟರಿಗಳನ್ನು ತಯಾರಿಸುವಂತಿಲ್ಲ. ಇದೇ ಕಾರಣಕ್ಕೆ ಎಡ್ವರ್ಡ್ ರನ್ನು ಬಂಧಿಸಿ ಅವರ ವಿರುದ್ಧ ಸೆಕ್ಷನ್ 14ಬಿ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT