ಟಿಟಿವಿ ದಿನಕರನ್ 
ದೇಶ

ತಮಿಳುನಾಡು ಸರ್ಕಾರ 3 ತಿಂಗಳಲ್ಲಿ ಪತನವಾಗಲಿದೆ: ಟಿಟಿವಿ ದಿನಕರನ್

ತಮಿಳುನಾಡಿನ ಆರ್ ಕೆ ನಗರ ವಿಧಾನಸಭೆಯ ಉಪಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಎಐಎಡಿಎಂಕೆ ಯ ಬಂಡಾಯ ನಾಯಕ ಟಿಟಿವಿ ದಿನಕರನ್, ತಮಿಳುನಾಡಿನ ಸರ್ಕಾರ ಕೆಲವೇ ತಿಂಗಳಲ್ಲಿ...

ಚೆನ್ನೈ: ತಮಿಳುನಾಡಿನ ಆರ್ ಕೆ ನಗರ ವಿಧಾನಸಭೆಯ ಉಪಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಎಐಎಡಿಎಂಕೆ ಯ ಬಂಡಾಯ ನಾಯಕ ಟಿಟಿವಿ ದಿನಕರನ್, ತಮಿಳುನಾಡಿನ ಸರ್ಕಾರ ಕೆಲವೇ ತಿಂಗಳಲ್ಲಿ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದಿನಕರನ್, ಹೆಸರಿಗಷ್ಟೇ ನಾನು ಪಕ್ಷೇತರ ಅಭ್ಯರ್ಥಿ, ಆದರೆ ಎಐಎಡಿಎಂಕೆಯ ಎಲ್ಲಾ ಕಾರ್ಯಕರ್ತರು ನನ್ನೊಂದಿಗೆ ಇದ್ದಾರೆ. ನನಗೆ ಅಮ್ಮನ (ಜಯಲಲಿತ) ಆಶೀರ್ವಾದವಿದೆ ಎಂದು ಹೇಳಿದ್ದು, ಈ ಸರ್ಕಾರ 3 ತಿಂಗಳಲ್ಲಿ ಪತನವಾಗಲಿದೆ ಎಂದು ಹೇಳಿದ್ದಾರೆ. 

ಆ ಕೆ ನಗರ ವಿಧಾನಸಭಾ ಕ್ಷೇತ್ರವನ್ನು ಅಮ್ಮ ಪ್ರತಿನಿಧಿಸುತ್ತಿದ್ದರು, ಈ ಕ್ಷೇತ್ರದಲ್ಲಿ ಜನತೆ ನೀಡಿರುವ ಬಹುಮತ ಪಕ್ಷ ಹಾಗೂ ಪಕ್ಷದ ಚಿಹ್ನೆ ಉಳಿಯಲಿದೆ ಎಂಬುದರ ಸಂಕೇತ, ನನಗೆ ಬೆಂಬಲ ನೀಡಿರುವ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ದಿನಕರನ್ ಹೇಳಿದ್ದಾರೆ. 

ಆರ್ ಕೆ ನಗರದ ಉಪಚುನಾವಣೆ ಮತ ಎಣಿಕೆಯಲ್ಲಿ ಟಿಟಿವಿ ದಿನಕರನ್ 39000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT