ಚೆನ್ನೈ: ತಮಿಳುನಾಡಿನ ಆರ್ ಕೆ ನಗರ ವಿಧಾನಸಭೆಯ ಉಪಚುನಾವಣೆಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಎಐಎಡಿಎಂಕೆ ಯ ಬಂಡಾಯ ನಾಯಕ ಟಿಟಿವಿ ದಿನಕರನ್, ತಮಿಳುನಾಡಿನ ಸರ್ಕಾರ ಕೆಲವೇ ತಿಂಗಳಲ್ಲಿ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದಿನಕರನ್, ಹೆಸರಿಗಷ್ಟೇ ನಾನು ಪಕ್ಷೇತರ ಅಭ್ಯರ್ಥಿ, ಆದರೆ ಎಐಎಡಿಎಂಕೆಯ ಎಲ್ಲಾ ಕಾರ್ಯಕರ್ತರು ನನ್ನೊಂದಿಗೆ ಇದ್ದಾರೆ. ನನಗೆ ಅಮ್ಮನ (ಜಯಲಲಿತ) ಆಶೀರ್ವಾದವಿದೆ ಎಂದು ಹೇಳಿದ್ದು, ಈ ಸರ್ಕಾರ 3 ತಿಂಗಳಲ್ಲಿ ಪತನವಾಗಲಿದೆ ಎಂದು ಹೇಳಿದ್ದಾರೆ.
ಆ ಕೆ ನಗರ ವಿಧಾನಸಭಾ ಕ್ಷೇತ್ರವನ್ನು ಅಮ್ಮ ಪ್ರತಿನಿಧಿಸುತ್ತಿದ್ದರು, ಈ ಕ್ಷೇತ್ರದಲ್ಲಿ ಜನತೆ ನೀಡಿರುವ ಬಹುಮತ ಪಕ್ಷ ಹಾಗೂ ಪಕ್ಷದ ಚಿಹ್ನೆ ಉಳಿಯಲಿದೆ ಎಂಬುದರ ಸಂಕೇತ, ನನಗೆ ಬೆಂಬಲ ನೀಡಿರುವ ಕ್ಷೇತ್ರದ ಜನತೆ ಹಾಗೂ ಕಾರ್ಯಕರ್ತರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ದಿನಕರನ್ ಹೇಳಿದ್ದಾರೆ.
ಆರ್ ಕೆ ನಗರದ ಉಪಚುನಾವಣೆ ಮತ ಎಣಿಕೆಯಲ್ಲಿ ಟಿಟಿವಿ ದಿನಕರನ್ 39000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos