ಮಲ್ಲಿಕಾರ್ಜುನ ಖರ್ಗೆ 
ದೇಶ

ಮಸೂದೆಯಲ್ಲಿರುವ ಜೈಲು ಶಿಕ್ಷೆ ಪ್ರಸ್ತಾಪಕ್ಕೆ ನಮ್ಮ ಸಹಮತವಿಲ್ಲ

"ಕಾಂಗ್ರೆಸ್ ಪಕ್ಷವು ತ್ರಿವಳಿ ತಲಾಕ್ ಮಸೂದೆಯಲ್ಲಿರುವ ಕೆಲ ಅಂಶಗಳನ್ನು ವಿರೋಧಿಸುತ್ತದೆ.....

ಬೆಂಗಳೂರು: "ಕಾಂಗ್ರೆಸ್ ಪಕ್ಷವು ತ್ರಿವಳಿ ತಲಾಕ್ ಮಸೂದೆಯಲ್ಲಿರುವ ಕೆಲ ಅಂಶಗಳನ್ನು ವಿರೋಧಿಸುತ್ತದೆ. ಅದರಲ್ಲಿ ಮುಖ್ಯವಾಗಿ ತ್ರಿವಳಿ ತಲಾಕ್ ಮಸೂದೆಯನುಸಾರ ಅಪರಾಧಿಗಳಿಗೆ ಜೈಲುವಾಸ ಶಿಕ್ಷೆಗೆ ಕಾಂಗ್ರೆಸ್ ಸಹಮತವಿಲ್ಲ. ತ್ರಿವಳಿ ತಲಾಖ್ ಮಸೂದೆಯಲ್ಲಿ ಸಾಕಷ್ಟು ನ್ಯೂನತೆಗಳು ಇವೆ, ಅದರಲ್ಲಿನ ಕೆಲವು ಅಂಶಗಳು ವಿವಾದವನ್ನು ಬಗೆಹರಿಸುವ ಬದಲಿಗೆ ಎರಡು ಕುಟುಂಬಗಳ ನಡುವೆ ದ್ವೇಷ ಹುಟ್ಟುಹಾಕುತ್ತದೆ. " ಬೆಂಗಳೂರಿನಲ್ಲಿ ಎ ಎನ್ ಐ ನ ಜತೆ ಮಾತನಾಡಿದ ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
"ತಲಾಕ್ ಮಸೂದೆಯನ್ನು ವಿರೋಧಿಸಿದ ವ್ಯಕ್ತಿಯನ್ನು ಜೈಲಿಗೆ ತಳ್ಳುವುದರಿಂದ ಆತನಿಗೆ ತನ್ನ ಪತ್ನಿಯ ಮೇಲೆ ದ್ವೇಷ ಬೆಳೆಯಬಹುದು. ಮತ್ತೆ ಆ ವ್ಯಕ್ತಿ ಅವಳನ್ನು ಸರಿಯಾಗಿ ನೋಡಿಕೊಲ್ಳದಿರಬಹುದು. ಹಾಗೆ ವ್ಯಕ್ತಿಯೊಬ್ಬನನ್ನು ಜೈಲಿಗೆ ಕಳಿಸುವ ಕಾರಣ ಆ ಕುಟುಂಬಕ್ಕೆ ಆರ್ಥಿಕವಾಗಿ ನಷ್ಟವಾಗಲಿದೆ.
"ಶೇ. 80 ರಷ್ಟು ಮುಸ್ಲಿಮರು ಕೆಳ ಮಧ್ಯಮ ವರ್ಗಕ್ಕೆ ಸೇರಿದವರಾಅಗಿದ್ದು ಅವರ ಬಡತನದ ಕಾರಣದಿಂದ ವ್ಯಕ್ತಿಯೊಬ್ಬನಿಗೆ ತನ್ನ ವೃದ್ದ ತಂದೆ ತಾಯಿ ಹಾಗೂ ಪತ್ನಿಯನ್ನು ನೋಡಿಕೊಳ್ಳುವುದು ಕಷ್ಟವಾಗಲಿದೆ. ಸರ್ಕಾರವು ಮಸೂದೆಯನ್ನು ಯಥಾವತ್ ರೀತಿಯಲ್ಲಿ ಹಾದುಹೋಗಲು ಪ್ರಯತ್ನಿಸುತ್ತಿರುವುದನ್ನು ನಾವು ವಿರೋಧಿಸುತ್ತಿದ್ದೇವೆ, ಮಸೂದೆಯನ್ನು ಮರುಪರಿಶೀಲನೆಗಾಗಿ ಕಳಿಸುವಂತೆ ನಾವು ಕೇಳಿದಾಗಳೂ ಸರ್ಕಾರ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಲೋಕಸಭೆಯಲ್ಲಿ ತ್ವರಿತವಾಗಿ ಅದನ್ನು ಪಾಸ್ ಮಾಡಲಾಗಿತ್ತು" ಖರ್ಗೆ ವಿವರಿಸಿದರು.
ಹಾಗಿದ್ದರೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ತ್ರಿವಳಿ ತಲಾಕ್ ಮಸೂದೆಯನ್ನು ವಿರೋಧಿಸುತ್ತದೆಯೆ ಎಂದು ಕೇಳಿದಾಗ ಖರ್ಗೆ ಸಮರ್ಪಕ ಉತ್ತರ ನೀಡಲಿಲ್ಲ. ಇತ್ತೀಚೆಗೆ ಲೋಕಸಭೆಯಲ್ಲಿ ಅಂಗೀಕಾರವಾದ ಮುಸ್ಲಿಂ ಮಹಿಳಾ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಮಸೂದೆ 2017 ಇದೀಗ ರಾಜ್ಯಸಭೆ ಅಂಗಳದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT