ಸಾಂದರ್ಭಿಕ ಚಿತ್ರ 
ದೇಶ

ಹುಡುಗಿಯ ಕುರೂಪ, ಅಂಗವೈಕಲ್ಯ ವರದಕ್ಷಿಣೆ ಬೇಡಿಕೆಗೆ ಕಾರಣ

ಅಂಗವೈಕಲ್ಯತೆ ಹಾಗೂ ಹುಡುಗಿ ಕುರೂಪಿ ಆಗಿರುವುದು ವರದಕ್ಷಿಣೆ ಬೇಡಿಕೆಗೆ ಕಾರಣ ಎಂದು ಮಹಾರಾಷ್ಟ್ರದ 12 ನೇ ತರಗತಿ ಪಠ್ಯಪುಸ್ತಕದಲ್ಲಿ ..

ಮುಂಬಯಿ: ಅಂಗವೈಕಲ್ಯತೆ ಹಾಗೂ ಹುಡುಗಿ ಕುರೂಪಿ ಆಗಿರುವುದು ವರದಕ್ಷಿಣೆ ಬೇಡಿಕೆಗೆ ಕಾರಣ ಎಂದು ಮಹಾರಾಷ್ಟ್ರದ 12 ನೇ ತರಗತಿ ಪಠ್ಯಪುಸ್ತಕದಲ್ಲಿ ನಮೂದಿಸಲಾಗಿದೆ.

12 ನೇ ತರಗತಿಯ ಸಮಾಜಶಾಸ್ತ್ರದ ಪಠ್ಯ ಪುಸ್ತಕದಲ್ಲಿ ಭಾರತದಲ್ಲಿ ಪ್ರಮು ಸಾಮಾಜಿಕ ಸಮಸ್ಯೆಗಳು ಎಂಬ ಶೀರ್ಷಿಕೆಯಡಿ ಈ ಈ ರೀತಿಯಾಗಿ ನಮೂದಿಸಲಾಗಿದೆ.ಹುಡುಗಿಯ ಕುರೂಪ ಮತ್ತು ಆಕೆಯ ಅಂಗವೈಕಲ್ಯತೆ ವರದಕ್ಷಿಣೆಗೆ ಕಾರಣ, ಹುಡುಗಿ ಕುರೂಪಿಯಾದಗಿದ್ದರೇ ಮತ್ತು ಅಂಗವಿಕಲೆ ಆಗಿದ್ದರೇ ಆಕೆಗೆ ಮದುವೆ ಆಗುವುದು ಕಷ್ಟ. ಇಂಥ ಹುಡುಗಿಯರನ್ನು ಮದುವೆಯಾಗಬೇಕಾದರೇ ಗಂಡಿನ ಕಡೆಯವರು ಹೆಚ್ಚಿನ ವರದಕ್ಷಿಣೆಗಾಗಿ ಬೇಡಿಕೆ ಇಡುತ್ತಾರೆ. ಆಗ ಹುಡುಗಿಯ ಕಡೆಯವರು ಅಸಹಾಯಕರಾಗುತ್ತಾರೆ. ಇದು ವರದಕ್ಷಿಣೆಗೆ ಕಾರಣವಾಗುತ್ತದೆ ಎಂದು ಪಠ್ಯದಲ್ಲಿ ಮುದ್ರಿಸಲಾಗಿದೆ.

ವಿಷಯದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಸಂಬಂಧ ಪಟ್ಟ ಮಂಡಳಿ ಜೊತೆ ಚರ್ಚಿಸಿದ್ದೇನೆ, 4 ವರ್ಷಗಳ ಹಿಂದೆ ಪಠ್ಯಪುಸ್ತಕ ಮುದ್ರಣವಾಗಿದ್ದು, ತಮಗೆ ಅದರ ಅರಿವಾಗಿಲ್ಲ ಎಂದು ಸೆಕೆಂಡರಿ ಸ್ಕೂಲ್ ಆಫ್ ಸರ್ಟಿಫಿಕೇಟ್ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. ಪುಸ್ತಕ ಮುದ್ರಣಗೊಂಡ ಅವಧಿಯಲ್ಲಿ ತಾವು ಅಧಿಕಾರದಲ್ಲಿ ಇರಲಿಲ್ಲ ಎಂದು ಅಧ್ಯಕ್ಷರು ವಿವರಣೆ ನೀಡಿದ್ದಾರೆ ಎಂದು  ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತಾವ್ಡೆ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!

EVM Survey: ಹಳೆಯ ಸಮೀಕ್ಷೆ ಬಳಸಿಕೊಂಡು ಜನರ ದಾರಿತಪ್ಪಿಸುತ್ತಿರುವುದು ವಿಷಾದನೀಯ - ಸಿಎಂ ಸಿದ್ದರಾಮಯ್ಯ

ಬಳ್ಳಾರಿ ಫೈರಿಂಗ್: ನಿನ್ನೆಯಷ್ಟೇ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪವನ್ ನೆಜ್ಜೂರ್ ಅಮಾನತು

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಬಂಡೆ ಬ್ಲಾಸ್ಟ್ ಗೆ ಗರ್ಭಿಣಿ ಚಿರತೆ, 3 ಮರಿಗಳ ಸಾವು: ತನಿಖೆಗೆ ಆದೇಶ, 'ತಪ್ಪು ಮಾಡಿದವರ ಬಿಡೋ ಮಾತೇ ಇಲ್ಲ'!

SCROLL FOR NEXT