ದೇಶ

ಆಸ್ತಿಗಾಗಿ ಸಹೋದರ ಸಂಬಂಧಿಯನ್ನೇ ಶೂಟ್ ಮಾಡಿದ ಬಿಎಸ್ಎಫ್ ಯೋಧ

Lingaraj Badiger
ಶ್ರೀಕಾಕುಲಂ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಬಿಎಸ್ಎಫ್ ಯೋಧನೊಬ್ಬ ತನ್ನ ಸಹೋದರ ಸಂಬಂಧಿಯ ಮೇಲೆಯೇ ಗುಂಡು ಹಾರಿಸಿದ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಗಜುಲ್ಲ ಕೊಳ್ಳಿವಲಸ ಗ್ರಾಮದಲ್ಲಿ ನಡೆದಿದೆ.
ದಿನಗೂಲಿ ಕಾರ್ಮಿಕನಾಗಿರುವ ಗೆದೆಲಾ ಹರಿಕೃಷ್ಣ ಹಾಗೂ ಅವರ ಸಹೋದರ ಸಂಬಂಧಿ ಬಿಎಸ್ಎಫ್ ನಲ್ಲಿ ಕೆಲಸ ಮಾಡುತ್ತಿದ್ದ ಗೆದೆಲಾ ಸುರ್ಯನಾರಾಯಣ್ ಮಧ್ಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ಸೂರ್ಯನಾಯರಾಣ ಹರಿಕೃಷ್ಣ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡು ಕುತ್ತಿಗೆಗೆ ತಗುಲಿದೆ. ಆದರೆ ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ಅಮದಲವಲಸ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಅವರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಗಾಯಗೊಂಡಿರುವ ಹರಿಕೃಷ್ಣನನ್ನು ಶ್ರೀಕಾಕುಲಂ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಬಿಎಸ್ಎಫ್ ಯೋಧ ನಾಡ ಪಿಸ್ತೂಲ್ ನಿಂದ ಶೂಟ್ ಮಾಡಿದ್ದು, ಆತನ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ನವೀನ್ ಕುಮಾರ್ ತಿಳಿಸಿದ್ದಾರೆ.
SCROLL FOR NEXT