ವಿವಾಹ ಸಮಾರಂಭ (ಸಾಂಕೇತಿಕ ಚಿತ್ರ) 
ದೇಶ

ಲೋಕಸಭೆ: ಅದ್ದೂರಿ ವಿವಾಹಗಳಿಗೆ ಕಡಿವಾಣ ಹಾಕುವ ಮಸೂದೆ ಮಂಡನೆ

ಸಂಪತ್ತಿನ ಪ್ರದರ್ಶನಕ್ಕಾಗಿ ಮದುವೆ ಸಮಾರಂಭಗಳಿಗೆ ಎಗ್ಗಿಲ್ಲದೇ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕುವುದಕ್ಕೆ ಲೋಕಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ.

ನವದೆಹಲಿ: ಸಂಪತ್ತಿನ ಪ್ರದರ್ಶನಕ್ಕಾಗಿ ಮದುವೆ ಸಮಾರಂಭಗಳಿಗೆ ಎಗ್ಗಿಲ್ಲದೇ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕುವುದಕ್ಕೆ ಲೋಕಸಭೆಯಲ್ಲಿ ಮಸೂದೆಯೊಂದನ್ನು ಮಂಡಿಸಲಾಗಿದೆ. 
ಮದುವೆ ಸಮಾರಂಭಕ್ಕೆ ಅತಿ ಹೆಚ್ಚು ಅತಿಥಿಗಳನ್ನು ಆಹ್ವಾನಿಸುವುದಕ್ಕೆ ಕಡಿವಾಣ ಹಾಕಲಿರುವ ಮಸೂದೆಯ ಪ್ರಕಾರ, 5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಖರ್ಚು ಮಾಡಿದ ಹಣದಲ್ಲಿ ಶೇ.10 ರಷ್ಟು ಹಣವನ್ನು ಬಡ ಹೆಣ್ಣು ಮಕ್ಕಳ ಮದುವೆ ಕಾರ್ಯಕ್ರಮಗಳಿಗೆ ನೀಡುವುದು ಕಡ್ಡಾಯವಾಗಿದೆ. 
ಕಾಂಗ್ರೆಸ್ ಸಂಸದೆ ರಂಜಿತ್ ರಂಜನ್ (ಸಂಸದ ಪಪ್ಪು ಯಾದವ್ ಪತ್ನಿ)  ವಿವಾಹ (ಕಡ್ಡಾಯ ನೋಂದಣಿ ಮತ್ತು ವ್ಯರ್ಥ ವೆಚ್ಚದ ತಡೆಗಟ್ಟುವಿಕೆ) ಮಸೂದೆ-2016 ಮಸೂದೆಯನ್ನು ಮಂಡಿಸಿದ್ದು, ಮುಂದಿನ ಲೋಕಸಭೆಯ ಕಲಾಪದಲ್ಲಿ ಇದನ್ನು ಖಾಸಗಿ ಮಸೂದೆಯನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ. ಮದುವೆ ಕಾರ್ಯಕ್ರಮಗಳಿಗೆ ಎಗ್ಗಿಲ್ಲದೇ, ವ್ಯರ್ಥವಾಗುವ ಖರ್ಚನ್ನು ತಡೆಗಟ್ಟುವುದು ಮದುವೆಯ ಪ್ರಮುಖ ಉದ್ದೇಶವಾಗಿದೆ.
ಸರಳ ವಿವಾಹ ಆಚರಣೆಯನ್ನು ಉತ್ತೇಜಿಸಬೇಕಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡಲಾಗುತ್ತಿದೆ. ಮದುವೆ ಎಂದರೆ ಸಂಪತ್ತು ಪ್ರದರ್ಶನ ಎಂಬಂತಾಗಿದೆ, ಬಡ ಕುಟುಂಬಗಳು ಹೆಚ್ಚು ಖರ್ಚು ಮಾಡಲು ಸಾಮಾಜಿಕ ಒತ್ತಡ ಹೆಚ್ಚುತ್ತಿದೆ, ಇದಕ್ಕೆ ಕಡಿವಾಣ ಹಾಕಬೇಕು, ದೊಡ್ಡ ಮಟ್ಟದಲ್ಲಿ ಇದು ಸಮಾಜಕ್ಕೆ ಒಳಿತಾದ ಬೆಳವಣಿಗೆಯಲ್ಲ ಎಂದು ರಂಜಿತ್ ರಂಜನ್ ಅಭಿಪ್ರಾಯಪಟ್ಟಿದ್ದಾರೆ. 
ಯಾವುದೇ ಕುಟುಂಬ ವಿವಾಹ ಕಾರ್ಯಕ್ರಮಗಳಿಗೆ 5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಆ ಕುಟುಂಬ ಮದುವೆಗೆ ಖರ್ಚು ಮಾಡುತ್ತಿರುವ ಪೂರ್ತಿ ಮೊತ್ತದ ಬಗ್ಗೆ ಮೊದಲೇ ವಿವರಣೆ ನೀಡಬೇಕು ಹಾಗೂ ಅದರಲ್ಲಿ ಶೇ.10 ರಷ್ಟು ಹಣವನ್ನು ಬಡ ಹೆಣ್ಣು ಮಕ್ಕಳ ಕಲ್ಯಾಣಾಭಿವೃದ್ಧಿಗೆ ನೀಡಬೇಕು ಎಂಬುದು ಮಸೂದೆಯ ಪ್ರಮುಖ ಅಂಶವಾಗಿದೆ. ಮಸೂದೆ ಜಾರಿಯಾದರೆ, ಮದುವೆ ಕಾರ್ಯಕ್ರಮಕ್ಕಾಗಿ ಅತಿಥಿಗಳ ಆಹ್ವಾನಕ್ಕೂ ಮಿತಿ ಹೇರುವ ಸಾಧ್ಯತೆ ಇದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT