ಶಶಿಕಲಾ 
ದೇಶ

ಪಕ್ಷದ ಚಟುವಟಿಕೆಗಳನ್ನು ಸದಾ ಗಮನಿಸುತ್ತಿರುತ್ತೇನೆ: ನಿಷ್ಠ ಶಾಸಕರಿಗೆ ಶಶಿಕಲಾ ಅಭಯ

ನಾನು ಎಲ್ಲಿದ್ದರೂ ಪಕ್ಷದ ಚಟುವಟಿಕೆಗಳನ್ನು ಸದಾ ಗಮನಿಸುತ್ತಾ ಇರುತ್ತೇನೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ...

ಚೆನ್ನೈ: ನಾನು ಎಲ್ಲಿದ್ದರೂ ಪಕ್ಷದ ಚಟುವಟಿಕೆಗಳನ್ನು ಸದಾ ಗಮನಿಸುತ್ತಾ ಇರುತ್ತೇನೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಹೇಳಿದ್ದಾರೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ತನ್ನ ನಿಷ್ಠಾವಂತ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಶಶಿಕಲಾ, ಭವಿಷ್ಯದಲ್ಲಿ ಪಕ್ಷದ ಗತಿಯೇನು ಎಂದು ಶಾಸಕರ ಪ್ರಶ್ನೆಗೆ ಉತ್ತಿರಿಸಿದ ಅವರು ನೀವೆಲ್ಲಾ ಒಗ್ಗಟ್ಟಾಗಿದ್ದಾರೆ ನನಗೆ ಯಾವುದೇ ಚಿಂತೆಯಿಲ್ಲ, ನಾನು ಶಿಕ್ಷೆಗೊಳಗಾಗಿ ಜೈಲು ಸೇರಬಹುದು ಆದರೇ ನನ್ನ ಮನಸ್ಸನ್ನು ಯಾರು ಬಂಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಎಐಎಡಿಎಂಕೆಯಿಂದ ನನ್ನನ್ನು ಬೇರ್ಪಡಿಸಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ,  ನಾನು ಎಲ್ಲೇ ಇರಲಿ, ರಾಜ್ಯದಲ್ಲಿರಲಿ ಅಥವಾ ಹೊರರಾಜ್ಯದಲ್ಲಿರಲಿ, ನನ್ನ ಯೋಚವೆಗಳು ಯಾವಾಗಲೂ ಪಕ್ಷದ ಬಗ್ಗೆಯೇ ಇರುತ್ತವೆ ಎಂದು ಶಶಿಕಲಾ ಹೇಳಿದ್ದಾರೆ.

ನೀವೆಲ್ಲರೂ ಒಗ್ಗಟ್ಟಾಗಿ ಇರಬೇಕಾದ ಪರಿಸ್ಥಿತಿ ಇದಾಗಿದೆ. ಮುಂದಿನ ಸರ್ಕಾರ ರಚನೆಗಾಗಿ ನೀವೆಲ್ಲಾ ಒಟ್ಟಿಗೆ ಇರಬೇಕು ಎಂದು ಶಾಸಕರಿಗೆ ಶಶಿಕಲಾ ಸೂಚಿಸಿದ್ದಾರೆ.

ಬೇರೆ ಕ್ಯಾಂಪ್ ಗೆ ವಿವಿದೆಡೆಯಿಂದ ಬೆಂಬಲ ಸಿಗಬಹುದು, ಆದರೆ ನಾವು ಮಾತ್ರ ಶಾಸಕರಿಗೆ ಬೆಂಬಲ ಸೂಚಿಸಬೇಕು. ಹಲವು ದಿನಗಳಿಂದ ನಾವು ತಾಳ್ಮೆಯಿಂದ ಇದ್ದೇವೆ, ರಾಜ್ಯಪಾಲರು ಶೀಘ್ರವೇ ನಮ್ಮನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ ಎಂದು ಶಶಿಕಲಾ ಶಾಸಕರಿಗೆ ಅಭಯ ಹಸ್ತ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT