ಖ್ವಾಜಾ ಮಹಮದ್‌ ಆಸಿಫ್ 
ದೇಶ

ಉಗ್ರ ಹಫೀಜ್ ಸಯೀದ್ 'ಅಪಾಯಕಾರಿ' ಹೇಳಿಕೆ: ಪಾಕ್ ಸಚಿವರ ವಿರುದ್ಧ ಭುಗಿಲೆದ್ದ ಪ್ರತಿಭಟನೆ

ಉಗ್ರ ಹಫೀಜ್ ಸಯೀದ್ ಪಾಕಿಸ್ತಾನಕ್ಕೆ ಅಪಾಯಕಾರಿ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಮಹಮದ್‌ ಆಸಿಫ್ ವಿರುದ್ಧ ಪಾಕಿಸ್ತಾನದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.

ಲಾಹೋರ್: ಉಗ್ರ ಹಫೀಜ್ ಸಯೀದ್ ಪಾಕಿಸ್ತಾನಕ್ಕೆ ಅಪಾಯಕಾರಿ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಮಹಮದ್‌ ಆಸಿಫ್ ವಿರುದ್ಧ ಪಾಕಿಸ್ತಾನದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. 
ಖ್ವಾಜಾ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹಲವು ರಾಜಕೀಯ, ಧಾರ್ಮಿಕ ಮುಖಂಡರು, ಖ್ವಾಜಾ ಅವರನ್ನು ಭಾರತದ ಮುಖವಾಣಿ ಎಂದು ಆರೋಪಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ದಿ ನ್ಯೂಸ್ ಇಂಟರ್ ನ್ಯಾಷನಲ್ ವರದಿಯ ಪ್ರಕಾರ, ಪಾಕಿಸ್ತಾನದ ಹಲವು ನಾಯಕರು, ಧಾರ್ಮಿಕ ಮುಖಂಡರು ಹಫೀಜ್ ಸಯೀದ್ ನನ್ನು ಪಾಕಿಸ್ತಾನದ ಮಹಾನ್ ದೇಶ ಭಕ್ತ ಎಂದು ಹೇಳಿದ್ದು, ಖ್ವಾಜಾ ಅವರ ಹೇಳಿಕೆಗೆ ಯಾವುದೇ ಆಧಾರವಿಲ್ಲ ಎಂದಿದ್ದಾರೆ. 
ಪಾಕಿಸ್ತಾನ ರಕ್ಷಣಾ ಪರಿಷತ್ ನ ಅಧ್ಯಕ್ಷ ಮೌಲಾನಾ ಸಮಿ-ಉಲ್-ಹಕ್ ಖ್ವಾಜಾ ಹೇಳಿಕೆಯನ್ನು ಟೀಕಿಸಿದ್ದು, ಖ್ವಾಜಾ ಬಹುಶಃ ಜರ್ಮನಿಯಲ್ಲಿ ಬೆಳೆದವರಿರಬೇಕು ಎಂದಿದ್ದಾರೆ. ಇನ್ನು ರಕ್ಷಣಾ ಪರಿಷತ್ ನ ಮತ್ತೋರ್ವ ಸದಸ್ಯ ಶಾ-ಝೈನ್ ಬುಗಟಿ ಹಫೀಜ್ ಸಯೀದ್ ನ ಬಂಧನ ಕಾಶ್ಮೀರಿಗಳ ಹೋರಾಟ ಕುಸಿಯುವಂತೆ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಖ್ವಾಜಾ ಅವರ ಹೇಳಿಕೆಯನ್ನು ಪ್ರಧಾನಿ ನವಾಜ್ ಷರೀಫ್ ಗಂಭೀರವಾಗಿ ಪರಿಗಣಿಸಬೇಕೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಡೀ ಇರಾನ್ ಅನ್ನು ಒಂದೇ ರಾತ್ರಿಯಲ್ಲಿ ನಾಶ ಮಾಡುತ್ತೇವೆ; ಬಹುಶಃ ಆ ರಾತ್ರಿ ಇಂದೇ ಆಗಿರಬಹುದು: ಟ್ರಂಪ್ ಕೊನೇಯ ಎಚ್ಚರಿಕೆ

IPL 2026: ಮಳೆಯಿಂದಾಗಿ KKR ಮತ್ತು PBKS ಪಂದ್ಯ ರದ್ದು, ಉಭಯ ತಂಡಗಳಿಗೆ ತಲಾ 1 ಅಂಕ!

ನಮ್ಮ ನಾಯಕರನ್ನು ಹುಡುಕಿ ಹುಡುಕಿ ಕೊಂದಾಕ್ಷಣ ಇರಾನ್ ಶಕ್ತಿ ನಾಶ ಆದಂತಲ್ಲ: ಅಮೆರಿಕಕ್ಕೆ ಮೊಜ್ತಬಾ ಖಮೇನಿ ಎಚ್ಚರಿಕೆ

ಅದು ಪೈಲಟ್ ರಕ್ಷಣಾ ಕಾರ್ಯಾಚರಣೆ ಅಲ್ಲ, ಯುರೇನಿಯಂ ಕಳ್ಳತನದ ಯತ್ನ, ಅದೂ ವಿಫಲವಾಗಿದೆ: ಅಮೆರಿಕ ವಿರುದ್ಧ ಇರಾನ್ ಆರೋಪ

ನಂಟು ಹೋಯ್ತು... ಗಂಟೂ ಹೋಯ್ತು....: ಇರಾನ್ ಗೆ ಆರ್ಥಿಕ ನೆರವಿಗೆ ಮುಂದಾಗಿದ್ದ ಕಾಶ್ಮೀರಿಗಳಿಗೆ ಶಾಕ್; RBI ಬ್ರೇಕ್

SCROLL FOR NEXT