ದೇಶ

ಅಮಿತ್ ಶಾಗಿಂತ ದೊಡ್ಡ 'ಕಸಬ್' ಮತ್ತೊಬ್ಬರಿಲ್ಲ: ಮಾಯಾವತಿ

Lingaraj Badiger
ಅಂಬೇಡ್ಕರ್ ನಗರ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಸಬ್ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಮುಖ್ಯಸ್ಥೆ ಮಾಯಾವತಿ ಅವರು, ಬಿಜೆಪಿ ಅಧ್ಯಕ್ಷರಿಗಿಂತ ದೊಡ್ಡ ಕಸಬ್(ಉಗ್ರ) ಮತ್ತೊಬ್ಬರಿಲ್ಲ ಎಂದು ಗುರುವಾರ ಹೇಳಿದ್ದಾರೆ.
ಇಂದು ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಅಮಿತ್ ಶಾ ಅವರಿಗಿಂತ ದೊಡ್ಡ ಕಸಬ್... ಉಗ್ರ ಮತ್ತೊಬ್ಬರಿಲ್ಲ ಎಂಬ ವಿಚಾರ ಈಡೀ ದೇಶಕ್ಕೆ ಗೊತ್ತಿದೆ. ಕಸಬ್ ಕುರಿತ ಅವರ ಹೇಳಿಕೆ ಕೇಸರಿ ಪಕ್ಷದ ಕೀಳುತನ ಪ್ರದರ್ಶಿಸುತ್ತದೆ ಎಂದಿದ್ದಾರೆ.
ಅಮಿತ್ ಶಾ ಅವರು ಉತ್ತರ ಪ್ರದೇಶವನ್ನು ಕಸಬ್ (ಕಾಂಗ್ರೆಸ್, ಸಮಾಜವಾದಿ ಪಕ್ಷ, ಬಿಎಸ್‍ಪಿ)ಯಿಂದ ಮುಕ್ತಗೊಳಿಸಿ ಎಂದು ಹೇಳಿದ್ದರು. ಶಾ ಹೇಳಿಕೆಗೆ ಕಾಂಗ್ರೆಸ್ ಸಹ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿಯ ಅಸಹ್ಯ ಯೋಚನೆಗಳೇ ಇಂಥಾ ಹೆಸರು ಹುಟ್ಟುಹಾಕುತ್ತಿವೆ. ಪಕ್ಷದ ಕೋಮುವಾದ ಮನಸ್ಥಿತಿಯನ್ನು ಇದು ತೋರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಮನು ಸಿಂಘ್ವಿ ಹೇಳಿದ್ದರು.
SCROLL FOR NEXT