ಸ್ಥೂಲ ಕಾಯದ ಪೊಲೀಸ್ 
ದೇಶ

ಶೋಭಾ ಡೇ ವ್ಯಂಗ್ಯವಾಡಿದ್ದ ಸ್ಥೂಲ ಕಾಯದ ಪೊಲೀಸ್ ಗೆ ಮುಂಬೈ ಆಸ್ಪತ್ರೆಯಿಂದ ಸಹಾಯ ಹಸ್ತ

ಟ್ವಿಟರ್ ನಲ್ಲಿ ಅಂಕಣಗಾರ್ತಿ ಶೋಭಾ ಡೇ ಅವರ ವ್ಯಂಗ್ಯಕ್ಕೆ ಗುರಿಯಾಗಿದ್ದ ಸ್ಥೂಲ ಕಾಯದ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗವತ್ ಗೆ ಮುಂಬೈ ಆಸ್ಪತ್ರೆಯೊಂದು ನೆರವಿಗೆ ಧಾವಿಸಿದೆ.

ಮುಂಬೈ: ಟ್ವಿಟರ್ ನಲ್ಲಿ ಅಂಕಣಗಾರ್ತಿ ಶೋಭಾ ಡೇ ಅವರ ವ್ಯಂಗ್ಯಕ್ಕೆ ಗುರಿಯಾಗಿದ್ದ ಸ್ಥೂಲ ಕಾಯದ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗವತ್ ಗೆ ಮುಂಬೈ ಆಸ್ಪತ್ರೆಯೊಂದು ನೆರವಿಗೆ ಧಾವಿಸಿದ್ದು, ಸ್ಥೂಲ ಕಾಯದ ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದೆ. 
ಸೈಫೀ ಆಸ್ಪತ್ರೆಯಲ್ಲಿ ದೌಲತ್ ರಾಮ್ ಜೋಗವತ್ ತೂಕ ಇಳಿಸಿಕೊಳ್ಳುವುದಕ್ಕೆ ಸಹಕಾರಿಯಾಗುವ ಚಿಕಿತ್ಸೆ ಪಡೆಯಲು ತಪಾಸಣೆಗೊಳಗಾಗಿದ್ದಾರೆ. ಅಗತ್ಯವಿದ್ದರೆ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ವೈದ್ಯರು ಹೇಳಿದ್ದಾರೆ. 
ಸ್ಥೂಲ ಕಾಯ ಉಂಟಾಗಲು ಕಾರಣ ಪತ್ತೆ ಮಾಡಿ ಅದಕ್ಕೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡುತ್ತೇವೆ. ತಪಾಸಣೆಯ ವಿವರಗಳನ್ನು ಪರಿಶೀಲಿಸಿ ಮುಂದಿನ ಕ್ರಮವನ್ನು ತಿಳಿಸಲಿದ್ದೇವೆ ಎಂದು ಸೈಫೀ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.  ಸ್ಥೂಲಕಾಯದ ಪೊಲೀಸರೊಬ್ಬರ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕಿ ಇಂದು ನಗರದಲ್ಲಿ ಭಾರೀ ಬಂದೋಬಸ್ತ್ ಎಂದು ಕ್ಯಾಪ್ಷನ್ ಹಾಕಿದ್ದರು, ಮೂರು ಗಂಟೆ ಕಳೆದ ನಂತರ ಮುಂಬೈ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಬಂದ ಪ್ರತಿಕ್ರಿಯೆಯಲ್ಲಿ ''ನಾವು ತಮಾಷೆಯನ್ನು ಇಷ್ಟಪಡುತ್ತೇವೆ ಶೋಭಾ ಡೇಯವರೇ. ಆದರೆ ಇದು ಮಾತ್ರ ಸಂಪೂರ್ಣ ತಪ್ಪು. ಜವಾಬ್ದಾರಿಯುತ ಪ್ರಜೆಗಳಾದ ನಿಮ್ಮಂತವರಿಂದ ನಾವು ಒಳ್ಳೆಯದನ್ನು ನಿರೀಕ್ಷಿಸುತ್ತೇವೆ ಎಂದು ಹೇಳಲಾಗಿತ್ತು. ಸ್ಥೂಲ ಕಾಯ ಹೊಂದಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಗೆ ಆರೋಗ್ಯದ ಸಮಸ್ಯೆ ಇದೆ ಎಂದು ನಂತರ ತಿಳಿದುಬಂದಿದ್ದು, ಮುಂಬೈ ಆಸ್ಪತ್ರೆ ನೆರವಿಗೆ ಧಾವಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT