ಸಂಗ್ರಹ ಚಿತ್ರ 
ದೇಶ

ದಟ್ಟ ಮಂಜಿಗೆ ಉತ್ತರ ಭಾರತ ತತ್ತರ: 70 ರೈಲುಗಳ ಸಂಚಾರದಲ್ಲಿ ವ್ಯತ್ಯಯ

ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಕವಿದಿರುವ ವಾತಾವರಣ ನಿರ್ಮಾಣಗೊಂಡಿದ್ದು, ಮಂಜು ಕವಿದ ವಾತಾವರಣದಿಂದಾಗಿ 70 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ 7 ರೈಲುಗಳ ಸಂಚಾರವನ್ನು...

ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ದಟ್ಟ ಮಂಜು ಕವಿದಿರುವ ವಾತಾವರಣ ನಿರ್ಮಾಣಗೊಂಡಿದ್ದು, ಮಂಜು ಕವಿದ ವಾತಾವರಣದಿಂದಾಗಿ 70 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ 7 ರೈಲುಗಳ ಸಂಚಾರವನ್ನು ರದ್ದು ಮಾಡಿರುವುದಾಗಿ ಗುರುವಾರ ತಿಳಿದುಬಂದಿದೆ.

ಉತ್ತರ ಭಾರತ ರೈಲ್ವೆ ವಿಭಾಗ ನೀಡಿರುವ ಮಾಹಿತಿ ಪ್ರಕಾರ, ಸಂಪೂರ್ಣ ಕ್ರಾಂತಿ ಎಕ್ರೆಪ್ರೆಸ್ ರೈಲು ವೇಳಾಪಟ್ಚಿಯಲ್ಲಿ ನೀಡಲಾದ ಸಮಯದ ನಂತರ 26 ಗಂಟೆಗಳ ಬಳಿಕ ಸಂಚಾರ ಮಾಡುತ್ತಿದೆ. ಭಾಗಲ್ಪುರ-ಆನಂದ್ ವಿಹಾರ್ ಗರೀಬ್ ನಾಥ್, ಭಾಗಲ್ಪುರ-ನವದೆಹಲಿ ವಿಕ್ರಂಶೀಲಾ ಎಕ್ಸ್ ಪ್ರೆಸ್ 23 ಗಂಟೆಗಳ ಕಾಲ ತಡವಾಗಿ ಪ್ರಯಾಣ ಮಾಡಲಿದೆ ಹಾಗೂ ವೈಶಾಲಿ ಎಕ್ಸ್ ಪ್ರೆಸ್ ರೈಲು 25 ಗಂಟೆಗಳ ಬಳಿಕ ಸಂಚಾರ ಆರಂಭ ಮಾಡಿತ್ತು ಎಂದು ಹೇಳಿದೆ.

ಇದಲ್ಲದೆ, 22 ರೈಲುಗಳ ಸಂಚಾರಗಳ ವೇಳಾಪಟ್ಟಿಯನ್ನು ಬದಲು ಮಾಡಲಾಗಿದ್ದು, ದೆಹಲಿ-ಮಾಲ್ಡಾ ಟೌನ್ ಫರಕ್ಕಾ ಎಕ್ಸ್ ಪ್ರೆಸ್, ನವದೆಹಲಿ-ಪ್ರೂರಿ ಎಕ್ಸ್ ಪ್ರೆಸ್, ಫಿರೋಜ್ಪುರ್ ಕಾಂಟ್-ದೆಹಲಿ ಸರಾಯ್ ರೊಹಿಲ್ಲಾ ಇಂಟರ್ ಸಿಟಿ ಎಕ್ಸ್ ಪ್ರೆಸ್, ನವದೆಹಲಿ-ರಾಜೇಂದ್ರ ನಗರ್ ಸಂಪೂರ್ಣ ಕ್ರಾಂತಿ ಎಕ್ಸೆಪ್ರೆಸ್, ಬಹಿಬ್ಗಂಜ್ ಶತಾಬ್ದಿ ಮತ್ತು ಲಖನೌ ಸ್ವರನ್ ಶತಾಬ್ದಿ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT