ದೇಶ

ಹರಿಯಾಣ: ಗುಡಿಸಲಿಗೆ ಬೆಂಕಿ, ನಾಲ್ಕು ಮಕ್ಕಳು ಸಜೀವ ದಹನ

Manjula VN

ಗುರುಗ್ರಾಮ: ಹರಿಯಾಣದ ಗುರುಗ್ರಾಮದಲ್ಲಿರುವ ಗುಡಿಸಲೊಂದರಲ್ಲಿ ಬೆಂಕಿ ಹೊತ್ತುಕೊಂಡಿದ್ದು, ಮಲಗಿದ್ದ ನಾಲ್ಕು ಮಕ್ಕಳು ಸಜೀವವಾಗಿ ದಹನವಾಗಿರುವ ಘಟನೆ ಶನಿವಾರ ನಡೆದಿದೆ.

ಗುರುಗ್ರಾಮದ ಖೇರ್ಕಿ ದೌಲಾ ಪ್ರದೇಶದಲ್ಲಿರುವ ಸ್ಲಂ ಪ್ರದೇಶದಲ್ಲಿದ್ದ ಗುಡಿಸಲೊಂದಕ್ಕೆ ಇಂದು ಬೆಳಿಗಿನ ಜಾವ ಇದ್ದಿಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಗುಡಿಸಲಿನಲ್ಲಿ ನಾಲ್ವರು ಮಕ್ಕಳು ನಿದ್ರೆ ಮಾಡುತ್ತಿದ್ದರು. ಈ ವೇಳೆ ಮಕ್ಕಳು ಸಜೀವವಾಗಿ ದಹನವಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

SCROLL FOR NEXT