ಸಾಂದರ್ಭಿಕ ಚಿತ್ರ 
ದೇಶ

ಭಾರತದಲ್ಲಿ ಮೊದಲ ಬಾರಿಗೆ ಸಮುದ್ರದಾಳದಲ್ಲಿ ಮದುವೆಯಾದ ಕೇರಳ ಜೋಡಿ

ವಿದೇಶಗಳಲ್ಲಿ ಆಸಗದಲ್ಲಿ ಹಾರಾಡುತ್ತಾ, ನೀರಿನಲ್ಲಿ ಈಜುತ್ತಾ ವಿವಾಹವಾದಂತಹ ಕೆಲವು ನಿದರ್ಶನಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ಆದರೆ, ಇದೇ ಮೊದಲ ಬಾರಿಗೆ ಎಂಬಂತೆ ಭಾರತದಲ್ಲೂ ಇಂತಹದ್ದೊಂದು ಅಪರೂಪದ ಮದುವೆಯೊಂದು ನಡೆದಿದ್ದು...

ತಿರುವನಂತಪುರ: ವಿದೇಶಗಳಲ್ಲಿ ಆಸಗದಲ್ಲಿ ಹಾರಾಡುತ್ತಾ, ನೀರಿನಲ್ಲಿ ಈಜುತ್ತಾ ವಿವಾಹವಾದಂತಹ ಕೆಲವು ನಿದರ್ಶನಗಳನ್ನು ನೋಡಿದ್ದೇವೆ, ಕೇಳಿದ್ದೇವೆ, ಆದರೆ, ಇದೇ ಮೊದಲ ಬಾರಿಗೆ ಎಂಬಂತೆ ಭಾರತದಲ್ಲೂ ಇಂತಹದ್ದೊಂದು ಅಪರೂಪದ ಮದುವೆಯೊಂದು ನಡೆದಿದ್ದು, ವಿಶಿಷ್ಟ ಮದುವೆಯೊಂದಕ್ಕೆ ದೇವರ ನಾಡು ಕೇರಳ ಗುರುವಾರ ಸಾಕ್ಷಿಯಾಯಿತು.

ಭಾರತದ ವರನಾಗಿರುವ ನಿಖಿಲ್ ಪವಾರ್ ಹಾಗೂ ಸ್ಲೋವೇಕಿಯಾದ ವಧು ಯೂನಿಯಾ ಪ್ರೋಗ್ರಾನ್ ಎಂಬ ಜೋಡಿ ನಿನ್ನೆ ಸಮುದ್ರದ ಆಳದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಕೋವಲಂ ಕರಾವಳಿಯಲ್ಲಿ ಕಡಲಿಗಿಳಿದ ಜೋಡಿಗಳು ನೀರಿನ ಆಳದಲ್ಲಿಯೇ ಉಂಗುರ ಹಾಗೂ ಚಿಪ್ಪಿನಿಂದ ತಯಾರಿಸಿದ ಹಾರಗಳನ್ನು ಬದಲಿಸಿಕೊಳ್ಳುವ ಮೂಲಕ ವಿವಾಹವಾಗಿದ್ದಾರೆ.

1 ಗಂಟೆಗಳ ಕಾರ ಈ ವಿವಾಹ ಕಾರ್ಯಕ್ರಮ ನಡೆದಿದೆ. ಇದಕ್ಕೆಂದೇ ಸಮುದ್ರದ ಅಡಿಯಲ್ಲಿ ಸಣ್ಣ ಪೋಡಿಯಂವೊಂದನ್ನು ನಿರ್ಮಿಸಲಾಗಿತ್ತು. ಅದರ ಮೇಲೆ ನಿಂತ, ವಿವಾಹ ಪ್ರಕ್ರಿಯೆಯನ್ನು ನಡೆಸಲಾಗಿದೆ. ಮದುವೆ ವೇಳೆ ಕೇಳಲಾಗುವ ಪ್ರಶ್ನೆಗಳನ್ನು ಹೊಂದಿದ್ದ ಮುದ್ರಿತ ಪ್ರತಿಯನ್ನು ವಧು-ವರರಿಗೆ ತೋರಿಸಲಾಗಿತ್ತು. ಇದಕ್ಕೆ ಅವರು ನಮ್ಮ ಒಪ್ಪಿಗೆ ಇದೆ ಎಂದು ಸಂಕೇತ ಸೂಚಿಸಿದ್ದರು ಈ ಮೂಲಕ ವಿವಾಹ ಪ್ರಕ್ರಿಯೆಗಳನ್ನು ಪೂರೈಸಲಾಗಿತ್ತು.

ವಿವಾಹವಾದ ನಂತರ ನೀರಿನಿಂದ ಹೊರಬಂದು ಸಂಸತ ವ್ಯಕ್ತಪಡಿಸಿರುವ ನಿಖಿಲ್, ಸಮುದ್ರದಾಳದಲ್ಲಿ ಮದುವೆಯಾಗುವ ನನ್ನ ಕನಸು ಇಂದು ನನಸಾಯಿತು ಎಂದು ಹೇಳಿದ್ದಾರೆ.

ನಂತರ ಪ್ರತಿಕ್ರಿಯೆ ನೀಡಿರುವ ಯುನಿಕಾ ಅವರು, ಸಮುದ್ರದಾಳದಲ್ಲಿ ನಡೆದ ಮದುವೆ ನಿಜಕ್ಕೂ ಸಂತಸವನ್ನು ತಂದಿತು. ಆದರೆ, ನೀರಿನಲ್ಲಿ ಕೊಚ ಭಯವಾಯಿತು ಎಂದು ಹೇಳಿದ್ದಾರೆ. ದಂಪತಿಗಳು ತಮ್ಮ ಮದುವೆಯನ್ನು ಮಹಾರಾಷ್ಟ್ರದಲ್ಲಿ ನೋಂದಣಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT