ಸಾಂದರ್ಭಿಕ ಚಿತ್ರ 
ದೇಶ

ಭ್ರಷ್ಟಾಚಾರದ ಕರಿನೆರಳು:ಉಚಿತ ರೇಷನ್ ನಿಲ್ಲಿಸಿದ ಭಾರತೀಯ ಸೇನೆ

ಶಾಂತಿಯುತ ಸ್ಥಳಗಳಿಗೆ ನೇಮಕಾತಿಯಾದ ರಕ್ಷಣಾ ಅಧಿಕಾರಿಗಳಿಗೆ ಅವರ ಸ್ಥಳಗಳಲ್ಲಿ ರೇಷನ್ ಸರಬರಾಜು...

ನವದೆಹಲಿ: ಶಾಂತಿಯುತ ಸ್ಥಳಗಳಿಗೆ ನೇಮಕಾತಿಯಾದ ರಕ್ಷಣಾ ಅಧಿಕಾರಿಗಳಿಗೆ ರೇಷನ್ ಸರಬರಾಜು ಮಾಡದಿರಲು 7ನೇ ವೇತನ  ಆಯೋಗ ನಿರ್ಧರಿಸಿದೆ. ರೇಶನ್ ಗೆ ಬದಲಾಗಿ ಇನ್ನು ಮುಂದೆ ಅಧಿಕಾರಿಗಳಿಗೆ ಪ್ರತಿ ದಿನಕ್ಕೆ ತಮ್ಮ ವೇತನದ ಜೊತೆಗೆ 96 ರೂಪಾಯಿ ರೇಷನ್ ಭತ್ಯೆ ಸಿಗಲಿದೆ. ಈ ಬದಲಾವಣೆ ಜುಲೈ 1ರಂದು ಜಾರಿಗೆ ಬಂದಿದ್ದು ಸೇನಾ ವಲಯದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.
ಸೇನಾ ಪಡೆಗಳಲ್ಲಿ ಆಹಾರ ಪೂರೈಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರದ ಆರೋಪಗಳ ನಂತರ ಮೂವರು ಸೇವಾ ಮುಖ್ಯಸ್ಥರ ಶಿಫಾರಸುಗಳ ಮೇರೆಗೆ ಸರ್ಕಾರ ತನ್ನ ಅಧಿಕಾರಿಗಳಿಗೆ ಪಡಿತರ ವಿತರಣೆಯನ್ನು ಬ್ರಿಟಿಷ್ ಕಾಲದ ನಿಯಮದಿಂದ ದೂರ ಸರಿದಿತ್ತು.
ಇದಕ್ಕೆ  ಹಲವು ಸೇನಾಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಟುವಾಗಿ ಟೀಕಿಸಿದ್ದು, ರೇಷನ್ ಭತ್ಯೆ ತೀರಾ ಕಡಿಮೆಯಾಗಿದೆ ಎಂದು ಹೇಳಿದೆ. ಮುಕ್ತ ಮಾರುಕಟ್ಟೆಯಿಂದ ಆಹಾರ ವಸ್ತುಗಳನ್ನು ಖರೀದಿಸಲು ಸರಕು ಮತ್ತು ಸೇವಾ ತೆರಿಗೆ ಸೇರಿದಂತೆ ಎರಡು ಪಟ್ಟು ತೆರಿಗೆ ಕಟ್ಟಬೇಕಾಗಿದೆ ಎಂದು ಹೇಳುತ್ತಾರೆ.
ಇಲ್ಲಿಯವರೆಗೆ ಸೇನೆ, ನೌಕಾಪಡೆ, ವಾಯು ಪಡೆ ಸೇರಿದಂತೆ ರಕ್ಷಣಾ ಅಧಿಕಾರಿಗಳಿಗೆ ಶಾಂತಿಯುತ ಸ್ಥಳಗಳಲ್ಲಿ ನೇಮಕಾತಿ ಹೊಂದಿದವರಿಗೆ ಕೂಡ ಉಚಿತ ರೇಷನ್ ಗಳನ್ನು ವಿತರಿಸಲಾಗುತ್ತಿತ್ತು. ಆಹಾರ ಧಾನ್ಯಗಳು, ಮಾಂಸ, ಹಣ್ಣು, ತರಕಾರಿಗಳು, ದಿನಸಿ ಪದಾರ್ಥಗಳನ್ನು ಸೇನಾಪಡೆಯ ಮುಖ್ಯ ಉಪ ವಿಭಾಗ ಸರಬರಾಜು ಮಾಡುತ್ತಿತ್ತು.  
ಆದರೆ ಮೌಲ್ಯಮಾಪಕ ನಿಯಂತ್ರಣ ಅಧಿಕಾರಿಗಳ(ಎಎಸ್ ಸಿ) ಬಂಧನದಿಂದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಸಂಗ್ರಹಣೆ ಮತ್ತು ವಿತರಣೆ ಅಕ್ರಮಗಳನ್ನು ತಡೆಯಲು ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT