ಬಿಜೆಪಿ ಶಾಸಕ ಹೆಚ್. ರಾಜಾ ಸಿಂಗ್ 
ದೇಶ

ಪಶ್ಚಿಮ ಬಂಗಾಳ ಕೋಮು ಗಲಭೆ: ಗುಜರಾತ್ ರೀತಿ ಹಿಂಸಾಚಾರಕ್ಕೆ ಬಿಜೆಪಿ ಶಾಸಕ ಕರೆ

ಕೋಮು ಗಲಭೆಯಿಂದಾಗಿ ಈಗಾಗಲೇ ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದ್ದು, ಇದರ ನಡುವೆಯೇ 2002 ಗುಜರಾತ್ ರಾಜ್ಯಲ್ಲಿ ಪ್ರತಿಕ್ರಿಯಿಸಿದಂತೆ ಪಶ್ಚಿಮ ಬಂಗಾಳದಲ್ಲೂ ಪ್ರತಿಕ್ರಿಯೆ ನೀಡುವಂತೆ ಬಿಜೆಪಿ ಶಾಸರೊಬ್ಬರೊಬ್ಬರು ಕರೆ ನೀಡಿದ್ದಾರೆ...

ನವದೆಹಲಿ: ಕೋಮು ಗಲಭೆಯಿಂದಾಗಿ ಈಗಾಗಲೇ ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದ್ದು, ಇದರ ನಡುವೆಯೇ 2002 ಗುಜರಾತ್ ರಾಜ್ಯಲ್ಲಿ ಪ್ರತಿಕ್ರಿಯಿಸಿದಂತೆ ಪಶ್ಚಿಮ ಬಂಗಾಳದಲ್ಲೂ ಪ್ರತಿಕ್ರಿಯೆ ನೀಡುವಂತೆ ಬಿಜೆಪಿ ಶಾಸರೊಬ್ಬರೊಬ್ಬರು ಕರೆ ನೀಡಿದ್ದಾರೆ. 
ಬದುರಿಯಾ ಮತ್ತು ಬಸೀರ್ಹತ್ ಜಿಲ್ಲೆಗಳಲ್ಲಿ ಕೋಮು ಉದ್ವಿಗ್ನತೆ ತೀವ್ರಗೊಂಡಿರುವ ನಡುವೆ, ಹಿಂದೂ ಸಮುದಾಯ ಹೆಚ್ಚು ಪ್ರಬಲವಾಗಿ ಪ್ರತಿಕ್ರಿಯಿಸಬೇಕು ಎಂದು ಬಿಜೆಪಿ ಶಾಸಕ ಹೆಚ್. ರಾಜಾ ಸಿಂಗ್ ಬಹಿರಂಗವಾಗಿಯೇ ಪ್ರತಿಪಾದಿಸುತ್ತಿರುವುದು ಕಂಡು ಬಂದಿದೆ. 
2002ರಲ್ಲಿ ಗುಜರಾತ್ ನಲ್ಲಿ ಪ್ರತಿಕ್ರಿಯಿಸಿದಂತೆ ಹಿಂದೂ ಸಮುದಾಯ ಪ್ರತಿರೋಧ ಪ್ರದರ್ಶಿಸಬೇಕೆಂದು ಹೈದರಾಬಾದ್ ನ ಬಿಜೆಪಿ ಶಾಸಕ ಎಚ್.ರಾಜಾ ಕರೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಸಂದೇಶ ಪ್ರಕಟಿಸಿರುವ ರಾಜಾ, ಬಂಗಾಳದ ಹುಲಿಗಳು ಎಚ್ಚರಗೊಳ್ಳಬೇಕು ಮತ್ತು ತಮ್ಮ ಸಮುದಾಯದ ರಕ್ಷಣೆಗೆ ಒಂದಾಗಬೇಕು ಎಂದು ಹೇಳಿದ್ದಾರೆ. 
ಮತ್ತೊಂಡೆಯಲ್ಲಿ ಬಿಜೆಪಿ ವಕ್ತಾರ ನೂಪುರ್ ಶರ್ಮಾ, 2002ರ ಗುಜರಾತ್ ಗಲಭೆಯ ಫೋಟೋ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ, ಪಶ್ಚಿಮ ಬಂಗಾಳದಲ್ಲಿನ ಹಿಂಸಾಚಾರದ ವಿರುದ್ಧ ಜಂತರ್ ಮಂತರ್ ನಲ್ಲಿ ತಮ್ಮ ಪ್ರತಿಭಟನೆಯಲ್ಲಿ ಕೈಜೋಡಿಸುವಂತೆ ಕರೆ ನೀಡಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT