ಟಿ.ಆರ್. ಝೀಲಿಯಾಂಗ್ 
ದೇಶ

ನಾಗಾಲ್ಯಾಂಡ್ ರಾಜಕೀಯ ಬಿಕ್ಕಟ್ಟು: ಪ್ರಮಾಣವಚನ ಸ್ವೀಕರಿಸಲು ಝೀಲಿಯಾಂಗ್'ಗೆ ಆಹ್ವಾನ

ವಿಶ್ವಾಸಮತಯಾಚಿಸುವಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿ ಶುರ್ಹೊಜೋಲಿ ಲೀಜೀಟ್ಸು ಅವರು ವಿಫಲರಾದ ಹಿನ್ನಲೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವಂತೆ ಟಿ.ಆರ್. ಝೀಲಿಯಾಂಗ್ ಅವರಿಗೆ ರಾಜ್ಯಪಾಲ ಪಿ.ಬಿ ಆಚಾರ್ಯ ಅವರು...

ಕೊಹಿಮಾ: ವಿಶ್ವಾಸಮತಯಾಚಿಸುವಲ್ಲಿ ನಾಗಾಲ್ಯಾಂಡ್ ಮುಖ್ಯಮಂತ್ರಿ ಶುರ್ಹೊಜೋಲಿ ಲೀಜೀಟ್ಸು ಅವರು ವಿಫಲರಾದ ಹಿನ್ನಲೆಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವಂತೆ ಟಿ.ಆರ್. ಝೀಲಿಯಾಂಗ್ ಅವರಿಗೆ ರಾಜ್ಯಪಾಲ ಪಿ.ಬಿ ಆಚಾರ್ಯ ಅವರು ಬುಧವಾರ ಸೂಚನೆ ನೀಡಿದ್ದಾರೆ. 
ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್'ನ 43 ಶಾಸಕರು ಮಾಜಿ ಸಿಎಂ ಟಿ.ಆರ್. ಝೀಲಿಯಾಂಗ್ ನೇತೃತ್ವದಲ್ಲಿ ಸಿಎಂ ಲೀಜೀಟ್ಸು ವಿರುದ್ಧ ಬಂಡಾಯವೆದ್ದ ಹಿನ್ನಲೆಯಲ್ಲಿ ಲೀಜಿಟ್ಸುಗೆ ವಿಶ್ವಾಸಮತ ಯಾಚಿಸಲು ಸೂಚಿಸಲಾಗಿತ್ತು. 
ವಿಶ್ವಾಸ ಮತಯಾಚನೆಗಾಗಿ ಇಂದು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಆದರೆ, ವಿಶ್ವಾಸಮತಯಾಚಿಸಲು ಶುರ್ಹೊಜೋಲಿ ಲೀಜೀಟ್ಸು ಹಾಗೂ ಅವರ ಬೆಂಬಲಿಗರು ಗೈರು ಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ರಾಜ್ಯಪಾಲ ಪಿ.ಬಿ ಆಚಾರ್ಯ ಅವರು ಪ್ರಮಾಣವಚನ ಸ್ವೀಕರಿಸುವಂತೆ ಝೀಲಿಯಾಂಗ್'ಗೆ ಆಹ್ವಾನ ನೀಡಿದ್ದಾರೆಂದು ತಿಳಿದುಬಂದಿದೆ. 
ಇಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವಂತೆ ಝೀಲಿಯಾಂಗ್'ಗೆ ಸೂಚಿಸಿರುವ ಆಚಾರ್ಯ ಅವರು, ಜುಲೈ.22ರೊಳಗಾಗಿ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿದ್ದಾರೆಂದು ವರದಿಗಳು ತಿಳಿಸಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT