ಅಪರಾಧಿ ಸುರೇಂದ್ರ ಕೋಲಿ (ಸಂಗ್ರಹ ಚಿತ್ರ) 
ದೇಶ

ನಿಥಾರಿ ಸರಣಿ ಹತ್ಯೆ ಪ್ರಕರಣ: ಪಂದೆರ್, ಸುರೇಂದ್ರ ಕೋಲಿಗೆ ಗಲ್ಲು ಶಿಕ್ಷೆ

ಇಡೀ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸಿಥಾರಿ ಅತ್ಯಾಚಾರ ಮತ್ತು ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೊನೀಂದರ್ ಸಿಂಗ್ ಪಂದೆರ್ ಮತ್ತು ಸುರೇಂದ್ರ ಕೋಲಿಗೆ ಸಿಬಿಐ ವಿಶೇಷ ನ್ಯಾಯಾಲಯ...

ಘಜಿಯಾಬಾದ್: ಇಡೀ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಸಿಥಾರಿ ಅತ್ಯಾಚಾರ ಮತ್ತು ಸರಣಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೊನೀಂದರ್ ಸಿಂಗ್ ಪಂದೆರ್ ಮತ್ತು ಸುರೇಂದ್ರ ಕೋಲಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಗಲ್ಲು ಶಿಕ್ಷೆ ವಿಧಿಸಿದೆ. 

20 ವರ್ಷದ ಯುವತಿ ಪಿಂಕಿ ಸರ್ಕಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಿಬಿಐ ವಿಶೇಷ ನ್ಯಾಯಾಧೀಶರಾದ ಪವನ್ ತಿವಾರಿಯವರು ತೀರ್ಪು ಪ್ರಕಟಿಸಿದ್ದಾರೆ. ನೋಯ್ಡಾದ ನಿತಾರಿಯಲ್ಲಿ ನಡೆದಿದ್ದ 16 ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಪೈಕಿ ಇದೂ ಒಂದಾಗಿದೆ.

16 ಪ್ರಕರಣಗಳ ಪೈಕಿ 8 ಪ್ರಕರಣಗಳಲ್ಲಿ ತೀರ್ಪು ಪ್ರಕಟಗೊಂಡಿದೆ. ಪ್ರಮುಖ ಆರೋಪಿ ಸುರೇಂದ್ರ ಕೋಲಿಗೆ ನ್ಯಾಯಾಲಯ ಎಲ್ಲಾ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ವಿಧಿಸಿದೆ. 

ಮಹಿಳೆ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ದೊರಕಿರುವ ವಿಧಿವಿಜ್ಞಾನ ಪ್ರಯೋಗಾಲಯದ ಸಾಕ್ಷ್ಯಾಧಾರಗಳಿನುಸಾರವಾಗಿ ಇಂದು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ವಕೀಲ ಜೆ.ಪಿ. ಶರ್ಮಾ ಅವರು ಆರೋಪಿಗಳಿಗೆ ಮರಣ ದಂಡನೆ ನೀಡುವಂತೆ ಮನವಿ ಮಾಡಿದ್ದರು. 
2006ರ ಅಕ್ಟೋಬರ್ 5 ಕೆಲಸದಿಂದ ಮನೆ ಮಹಿಳೆಯೊಬ್ಬರು ಹಿಂತಿರುಗುತ್ತಿದ್ದರು. ಆರೋಪಿ ಪಂದೆರ್ ಮನೆಯ ಬಳಿ ಬರುತ್ತಿದ್ದ ಮಹಿಳೆಯನ್ನು ನೋಡಿದ್ದ ಕೋಲಿ ಆಕೆಯ ಮೇಲೆ ಆಕರ್ಷಿತ ಗೊಂಡಿದ್ದಾರೆ. ನಂತರ ಮನೆಯೊಳಗೆ ಮಹಿಳೆಯನ್ನು ಬಲವಂತದಿಂದ ಕರೆದೊಯ್ಡು ಆಕೆಯ ಮೇಲೆ ಅತ್ಯಾಚಾರವೆಸಗಲಿ ರುಂಡವನ್ನು ಕತ್ತರಿಸಿ ಹತ್ಯೆ ಮಾಡಿದ್ದ. ತನಿಖೆ ನಡೆಸುತ್ತಿದ್ದ ವೇಳೆ ಪಂದೆರ್ ಮನೆಯ ಹಿಂಭಾಗದಲ್ಲಿ ಮಹಿಳೆಯ ರುಂಡ ದೊರಕಿತ್ತು. ಇದಾದ ಬಳಿಕ ಹವಾರು ಮಾನವ ಅವಶೇಷಗಳು ಪತ್ತೆಯಾಗಿದ್ದವು. ಇದರಂತೆ ಸರಣಿ ಕಗ್ಗೊಲೆ ಪ್ರಕಱಣಗಳು ಬೆಳಕಿಗೆ ಬಂತಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT