ಸೋನಿಯಾ ಗಾಂಧಿ, ನಿತೀಶ್ ಕುಮಾರ್, ಲಾಲೂ ಪ್ರಸಾದ್
ಪಾಟ್ನಾ: ಬಿಹಾರದಲ್ಲಿ ಆರ್ಜೆಡಿ ಮತ್ತು ಜೆಡಿಯು ಮೈತ್ರಿ ಸರ್ಕಾರವನ್ನು ಒಡೆಯಲು ಸಾಧ್ಯವಿಲ್ಲ ಎಂದು ಉಭಯ ಪಕ್ಷದ ನಾಯಕರು ಹೇಳಿದ್ದಾರೆ.
ಮುಂಗಾರು ಅಧಿವೇಶನ ಹಿನ್ನೆಲೆ ಮಹಾಘಟಬಂಧನ್(ಮಹಾಮೈತ್ರಿ) ಪಕ್ಷಗಳಾದ ರಾಷ್ಟ್ರೀಯ ಜನತಾದಳ(ಆರ್ಜೆಡಿ) ಮತ್ತು ಜಾತ್ಯಾತೀತ ಜನತಾದಳ(ಜೆಡಿಯು) ಬೇರೆ ಬೇರೆ ಸಭೆಗಳನ್ನು ನಡೆಸಿದ್ದವು. ನಂತರ ಮಾತನಾಡಿದ ಆರ್ಜೆಡಿ ಪಕ್ಷದ ಶಾಕ ಬಾಯ್ ಬೈರೆಂದ್ರ ಅವರು, ಇಂತಹ ಸಭೆಗಳು ಸಾಮಾನ್ಯ. ಆದರೆ ಬಿಹಾರದಲ್ಲಿ ಸರ್ಕಾರ ನಡೆಸುತ್ತಿರುವ ಆರ್ಜೆಡಿ ಮತ್ತು ಜೆಡಿಯು ತಮ್ಮ ಮೈತ್ರಿಯನ್ನು ಕಡಿದುಕೊಳ್ಳಲಿವೆ ಎಂಬ ಊಹಾಪೋಹಗಳಿಗೆ ಅಂತ್ಯವಾಡಿದ ಅವರು ಬಿಹಾರದ ಮಹಾಮೈತ್ರಿ ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ಜಾತ್ಯಾತೀತ ಜನತಾದಳ(ಜೆಡಿಯು) ನಾಯಕ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರವಣ್ ಕುಮಾರ್ ಸಹ ಇದೇ ಮಾತನ್ನು ಹೇಳಿದ್ದಾರೆ.
ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ರಾಜಿನಾಮೆಗೆ ಜೆಡಿಯು ಒತ್ತಾಯಿಸುತ್ತಿದ್ದು ಈ ಮೂಲಕ ಮಹಾಮೈತ್ರಿ ಕಡಿದುಕೊಳ್ಳಲು ಜೆಡಿಯು ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ನಂತರ ಅವರ ಪುತ್ರ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸಿಬಿಐ ತನಿಖೆ ಎದುರಿಸುತ್ತಿದ್ದಾರೆ.