ನಟ ಕಮಲ್ ಹಾಸನ್ 
ದೇಶ

ತಮಿಳು ಬಿಗ್ ಬಾಸ್ ನಲ್ಲಿ ಸಮುದಾಯಕ್ಕೆ ಅವಮಾನ: ಕಮಲ್ ಹಾಸನ್, ಚಾನೆಲ್ ಮತ್ತು ನಟಿಗೆ ನೊಟೀಸ್ ಜಾರಿ

ಬಿಗ್ ಬಾಸ್ ತಮಿಳು ರಿಯಾಲಿಟಿ ಶೋನಲ್ಲಿ ನಿರ್ದಿಷ್ಟ ಸಮುದಾಯವನ್ನು ಅವಹೇಳನ ಮಾಡಲಾಗಿದ್ದು, ಅದಕ್ಕಾಗಿ 100 ಕೋಟಿ ...

ಕೊಯಂಬತ್ತೂರು: ಬಿಗ್ ಬಾಸ್ ತಮಿಳು ರಿಯಾಲಿಟಿ ಶೋನಲ್ಲಿ ನಿರ್ದಿಷ್ಟ ಸಮುದಾಯವನ್ನು ಅವಹೇಳನ ಮಾಡಲಾಗಿದ್ದು, ಅದಕ್ಕಾಗಿ 100 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಪುತಿಯ ತೃಣಗಂ ಪಕ್ಷದ ಸ್ಥಾಪಕ ಕೆ. ಕೃಷ್ಣಸಾಮಿ ತಮ್ಮ ವಕೀಲರ ಮೂಲಕ ಕಾರ್ಯಕ್ರಮದ ನಿರೂಪಕ ನಟ ಕಮಲ್ ಹಾಸನ್, ನಟಿ ಗಾಯತ್ರಿ ರಘುರಾಮ್ ಮತ್ತು ಟಿವಿ ವಾಹಿನಿಗೆ ನೊಟೀಸ್ ಕಳುಹಿಸಿದ್ದಾರೆ.
ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನ ಎಂದು ಸಹ ಸ್ಪರ್ಧಿಯನ್ನು ಅವಹೇಳನ ಮಾಡಿದ ಬಿಗ್ ಬಾಸ್ ತಮಿಳಿನ ಸ್ಪರ್ಧಿ ಗಾಯತ್ರಿ ರಘುರಾಮ್ ಕ್ಷಮೆ ಕೇಳುವಂತೆ ನಾನು ಈಗಾಗಲೇ ಮನವಿ ಮಾಡಿದ್ದೇನೆ. ಆಕೆ ಬಳಸಿದ ಶಬ್ದ ನಿರ್ದಿಷ್ಟ ಸಮುದಾಯದವರಿಗೆ ನೋವುಂಟು ಮಾಡಿದ್ದು, ಅದನ್ನು ಚಾನೆಲ್ ಎಡಿಟ್ ಮಾಡಿ  ಪ್ರಸಾರ ಮಾಡುವಾಗ ಚಾನೆಲ್ ಎಡಿಟ್ ಮಾಡಬೇಕಿತ್ತು ಎಂದು ಕೃಷ್ಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ನಾನು ಮನವಿ ಮಾಡಿ 2 ವಾರ ಕಳೆದ ನಂತರವೂ ಚಾನೆಲ್ ಆಗಲಿ, ಕಮಲ್ ಹಾಸನ್ ಅವರಾಗಲಿ ಅಥವಾ ನಟಿ ಗಾಯತ್ರಿಯಾಗಲಿ ಕ್ಷಮೆ ಕೇಳಲಿಲ್ಲ. ವಕೀಲರು ಕಳುಹಿಸಿರುವ ನೊಟೀಸ್ ಗೆ ಇನ್ನು ವಾರದೊಳಗೆ ಉತ್ತರಿಸದಿದ್ದರೆ ಅವರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮಂಗಳೂರು: ಆಟೋಗೆ KSRTC ಬಸ್ ಡಿಕ್ಕಿ; ಭೀಕರ ಅಪಘಾತದಲ್ಲಿ ಮಗು ಸೇರಿ ಆರು ಸಾವು - Video

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

SCROLL FOR NEXT