ಬಿಸಿಲ ಧಗೆಗೆ ಕಂಗೆಟ್ಟು ಜಿಗಿದು ಕಾರಿನೊಳಗೆ ಸಿಲುಕಿದ ಕುದುರೆ 
ದೇಶ

ಬಿಸಿಲ ಧಗೆಗೆ ಕಂಗೆಟ್ಟು ಜಿಗಿದು ಕಾರಿನೊಳಗೆ ಸಿಲುಕಿದ ಕುದುರೆ

ರಾಜಸ್ತಾನದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಸಿಲಿನ ಧಗೆ ತಾಳಲಾರದ ಕುದುರೆಯೊಂದು ದಿಕ್ಕೆಟ್ಟು ಓಡಿ ಕಾರಿನ ಮೇಲೆ ಜಿಗಿದು, ಕಾರಿನೊಳಗೆ ಸಿಲುಕಿ ಹಾಕಿಕೊಂಡಿರುವ...

ಜೈಪುರ: ರಾಜಸ್ತಾನದಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬಿಸಿಲಿನ ಧಗೆ ತಾಳಲಾರದ ಕುದುರೆಯೊಂದು ದಿಕ್ಕೆಟ್ಟು ಓಡಿ ಕಾರಿನ ಮೇಲೆ ಜಿಗಿದು, ಕಾರಿನೊಳಗೆ ಸಿಲುಕಿ ಹಾಕಿಕೊಂಡಿರುವ ಘಟನೆಯ ಜೈಪುರದಲ್ಲಿ ನಡೆದಿದೆ. 
ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದೆ. ಕುದುರೆ ಸವಾರ ರಸ್ತೆಯೊಂದರಲ್ಲಿ ಕುದುರೆಯನ್ನು ಕಟ್ಟಿದ್ದಾನೆ. ಸ್ಥಳದಲ್ಲಿ ಅತೀವ ಬಿಸಿಲಿನೊಂದಿಗೆ, ವಾಹನಗಳ ಶಬ್ಧ ಕೂಡ ಹೆಚ್ಚಾಗಿತ್ತು. ಇದರಿಂದಾಗಿ ಕಂಗೆಟ್ಟ ಕುದುರೆ ಕಂಗೆಟ್ಟು ದಿಕ್ಕಾಪಾಲಾಗಿ ಓಡಲು ಆರಂಭಿಸಿದೆ. ಅಡ್ಡ ಬಂದಿರುವ ಕಾರಿನ ಮೇಲೆ ಕುದುರೆ ಜಿಗಿದಿದೆ. ಈ ವೇಳೆ ಕಾರಿನ ಮುಂಭಾಗದ ಗಾಜು ಪುಡಿಪುಡಿಯಾಗಿ ಕುದುರೆ ಕಾರಿನೊಳಗೆ ಸಿಲುಕಿ ಹಾಕಿಕೊಂಡಿದೆ. 
ಕುದುರೆ ಕಾರಿನೊಳಗೆ ಸಿಲುಕಿ ಹಾಕಿಕೊಂಡಿರುವುದನ್ನು ಕಂಡ ಸ್ಥಳೀಯರು ಆರಂಭದಲ್ಲಿ ಏನು ಮಾಡಬೇಕೆಂಬುದನ್ನು ತಿಳಿಯದೆ ಕುದುರೆಯನ್ನು ನೋಡಲು ಆರಂಭಿಸಿದ್ದಾರೆ. ನಂತರ ನಿಧಾನಗತಿಯಲ್ಲಿ ಒಬ್ಬೊಬ್ಬರಾಗಿ ಬಂದು ಕಾರಿನ ಚಾಲಕ ಹಾಗೂ ಕುದುರೆಯನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಕಾರು ಚಾಲಕ ಪಂಕಜ್ ಜೋಶಿ ಎಂಬುವವರಿಗೆ ಗಾಯಗಳಾಗಿವೆ. ಕುದುರೆಗೂ ಕೂಡ ಗಾಯಗೊಂಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT