ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ 
ದೇಶ

ಗುಜರಾತ್: ಸ್ಮೃತಿ ಇರಾನಿ ಮೇಲೆ ಬಳೆ ಎಸೆದು, ವಂದೇ ಮಾತರಂ ಘೋಷಣೆ ಕೂಗಿದ ವ್ಯಕ್ತಿ!

ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರ ಮೇಲೆ ವ್ಯಕ್ತಿಯೋರ್ವ ಬಳೆಗಳನ್ನು ಎಸೆದು, ವಂದೇ ಮಾತರಂ ಘೋಷಣೆ ಕೂಗಿರುವ ಘಟನೆಯೊಂದು ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ...

ಅಹ್ಮದಾಬಾದ್: ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರ ಮೇಲೆ ವ್ಯಕ್ತಿಯೋರ್ವ ಬಳೆಗಳನ್ನು ಎಸೆದು, ವಂದೇ ಮಾತರಂ ಘೋಷಣೆ ಕೂಗಿರುವ ಘಟನೆಯೊಂದು ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.
ಕೇಂದ್ರದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆಯ ಅಂಗವಾಗಿ ನಿನ್ನೆ ಸಂಜೆ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನುದ್ದೇಶಿಸಿ ಸಚಿವೆ ಸ್ಮೃತಿ ಇರಾನಿ ಮಾತನಾಡುತ್ತಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಕೇತನ್ ಕಸ್ವಾಲ್ ಎಂಬ ವ್ಯಕ್ತಿ ಇರಾನಿಯವರನ್ನು ಗುರಿಯಾಗಿರಿಸಿಕೊಂಡು ಏಕಾಏಕಿ ಬಳೆಗಳನ್ನು ಎಸೆದಿದ್ದಾರೆ. 
ಕೇತನ್ ಸುಮಾರು 2-3 ಮೂರು ಬಳೆಗಳನ್ನು ಇರಾನಿಯವರತ್ತ ಎಸೆದಿದ್ದಾನೆ. ಬಳೆಗಳು ಸಚಿವರಿದ್ದ ವೇದಿಕೆಯಿಂದ ಕೊಂಚ ದೂರತದಲ್ಲಿ ಬಿದ್ದಿದೆ. ಬಳೆ ಎಸೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 
ಕಾರ್ಯಕ್ರಮದಲ್ಲಿ ಸಚಿವೆ ಇರಾನಿಯವರು ಮಾತನಾಡಲು ಆರಂಭಿಸುತ್ತಿದ್ದಂತೆಯೇ ವೇದಿಕೆಯಿಂದ ದೂರದಲ್ಲಿ ಕುಳಿತಿದ್ದ ಕೇತನ್ ಇದ್ದಕ್ಕಿದ್ದಂತೆಯೇ ಸಚಿವೆ ಮೇಲೆ 2-3 ಬಳೆಗಳನ್ನುಎಸೆದ. ನಂತರ ವಂದೇ ಮಾತರಂ ಎಂದು ಘೋಷಣೆ ಕೂಗಿದ. ಕೇತನ್ ಬಹಳ ಹಿಂದಿನಿಂದ ಬಳೆಗಳನ್ನು ಎಸೆದ ಪರಿಣಾಮ ಬಳೆಗಳು ಸಚಿವೆ ಮೇಲೆ ಬೀಳಲಿಲ್ಲ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಪೊಲೀಸ್ ಅಧಿಕಾರಿ ಜಗದೀಶ್ ಪಟೇಲ್ ಅವರು ಹೇಳಿದ್ದಾರೆ. 
ಆರೋಪಿ ಕೇತನ್ ಕಾಂಗ್ರೆಸ್ ಆಗಲೀ ಅಥವಾ ಇನ್ನಾವುದೇ ಪಕ್ಷ, ಸಂಘಟನೆಗಳಿಗೆ ಸೇರಿದವನಲ್ಲ. ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ವಂದೇ ಮಾತರಂ ಎನ್ನುತ್ತಾ ಸಚಿವೆ ಮೇಲೆ ಬಳೆಗಳನ್ನು ಎಸೆದಿದ್ದಾರೆಂದು ಪಟೇಲ್ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT