ದೇಶ

ನದಿ ಜೋಡಣೆಗೆ ರಜನಿಕಾಂತ್ ಬೆಂಬಲ: 1 ಕೋಟಿ ರು ಸಹಾಯಧನ

Shilpa D
ಚೆನ್ನೈ: ಸೂಕ್ತ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡುವುದಾಗಿ ಹೇಳಿರುವ ನಟ ರಜನೀಕಾಂತ್ ಆ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ತಮಿಳುನಾಡಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸೂಪರ್‌ ಸ್ಟಾರ್ ರಜನಿಕಾಂತ್‌ ಕೈ ಜೋಡಿಸಿದ್ದಾರೆ. ದಕ್ಷಿಣ ಭಾರತದ ನದಿ ಜೋಡಣೆಗಾಗಿ 1 ಕೋಟಿ ರೂ. ಸಹಾಯಧನ ನೀಡುವುದಾಗಿ ಹೇಳಿದ್ದಾರೆ. 
ಪಿ ಆಯಕಣ್ಣು ನೇತೃತ್ವದ 16 ರೈತರಿದ್ದ ನಿಯೋಗವನ್ನು ಭಾನುವಾರಂದು ರಜನಿಕಾಂತ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿತು. ರಜನೀಕಾಂತ್ ನದಿ ಜೋಡಣೆಗಾಗಿ 1 ಕೋಟಿ ರು ಹಣ ನಮಗೆ ನೀಡಲು ಮುಂದಾದರು, ಆದರೇ ಅದನ್ನು ಪಡೆಯುವ ಅರ್ಹ ವ್ಯಕ್ತಿಗಳು ನಾವಲ್ಲ, ಆ ಹಣವನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಎಂದು ರಜನಿ ಅವರಲ್ಲಿ ಮನವಿ ಮಾಡಿರುವುದಾಗಿ ಆಯಕಣ್ಣು ಹೇಳಿದ್ದಾರೆ.
ದೊಡ್ಡ ನದಿಗಳಾದ ಗೋದಾವರಿ, ಕೃಷ್ಣ, ಪಲರು ಮತ್ತು ಕಾವೇರಿ ನದಿ ಸೇರಿದಂತೆ ಪ್ರಮುಖ ನದಿಗಳ ಜೋಡಣೆಗಾಗಿ ರೈತರು ನೀಡಿರುವ ಪ್ರಸ್ತಾವನೆಗೆ ರಜನಿ ಬೆಂಬಲ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡುವುದಾಗಿ ರಜನಿಕಾಂತ್ ಭರವಸೆ ನೀಡಿದ್ದಾರೆ.
SCROLL FOR NEXT