ರಜನಿಕಾಂತ್ 
ದೇಶ

ನದಿ ಜೋಡಣೆಗೆ ರಜನಿಕಾಂತ್ ಬೆಂಬಲ: 1 ಕೋಟಿ ರು ಸಹಾಯಧನ

ತಮಿಳುನಾಡಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸೂಪರ್‌ ಸ್ಟಾರ್ ರಜನಿಕಾಂತ್‌ ಕೈ ಜೋಡಿಸಿದ್ದಾರೆ. ದಕ್ಷಿಣ ಭಾರತದ ನದಿ ಜೋಡಣೆಗಾಗಿ...

ಚೆನ್ನೈ: ಸೂಕ್ತ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡುವುದಾಗಿ ಹೇಳಿರುವ ನಟ ರಜನೀಕಾಂತ್ ಆ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ತಮಿಳುನಾಡಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸೂಪರ್‌ ಸ್ಟಾರ್ ರಜನಿಕಾಂತ್‌ ಕೈ ಜೋಡಿಸಿದ್ದಾರೆ. ದಕ್ಷಿಣ ಭಾರತದ ನದಿ ಜೋಡಣೆಗಾಗಿ 1 ಕೋಟಿ ರೂ. ಸಹಾಯಧನ ನೀಡುವುದಾಗಿ ಹೇಳಿದ್ದಾರೆ. 
ಪಿ ಆಯಕಣ್ಣು ನೇತೃತ್ವದ 16 ರೈತರಿದ್ದ ನಿಯೋಗವನ್ನು ಭಾನುವಾರಂದು ರಜನಿಕಾಂತ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿತು. ರಜನೀಕಾಂತ್ ನದಿ ಜೋಡಣೆಗಾಗಿ 1 ಕೋಟಿ ರು ಹಣ ನಮಗೆ ನೀಡಲು ಮುಂದಾದರು, ಆದರೇ ಅದನ್ನು ಪಡೆಯುವ ಅರ್ಹ ವ್ಯಕ್ತಿಗಳು ನಾವಲ್ಲ, ಆ ಹಣವನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಎಂದು ರಜನಿ ಅವರಲ್ಲಿ ಮನವಿ ಮಾಡಿರುವುದಾಗಿ ಆಯಕಣ್ಣು ಹೇಳಿದ್ದಾರೆ.
ದೊಡ್ಡ ನದಿಗಳಾದ ಗೋದಾವರಿ, ಕೃಷ್ಣ, ಪಲರು ಮತ್ತು ಕಾವೇರಿ ನದಿ ಸೇರಿದಂತೆ ಪ್ರಮುಖ ನದಿಗಳ ಜೋಡಣೆಗಾಗಿ ರೈತರು ನೀಡಿರುವ ಪ್ರಸ್ತಾವನೆಗೆ ರಜನಿ ಬೆಂಬಲ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡುವುದಾಗಿ ರಜನಿಕಾಂತ್ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT