ಪ್ರಿಂಟ್ ಮೀಡಿಯಾ 
ದೇಶ

10 ವರ್ಷಗಳಲ್ಲಿ ಶೇ.61 ರಷ್ಟು ಬೆಳವಣಿಗೆ ದಾಖಲಿಸಿದ ಭಾರತದ ಪತ್ರಿಕೆಗಳು: ಎಬಿಸಿ

ಜಾಗತಿಕವಾಗಿ ಪ್ರಿಂಟ್ ಮೀಡಿಯಾಗಿಂತ ವೆಬ್ ಮೀಡಿಯಾಗೆ ಹೆಚ್ಚು ಬೇಡಿಕೆ ಉಂಟಾಗುತ್ತಿದೆ. ಆದರೆ ಜಾಗತಿಕ ಟ್ರೆಂಡ್ ಗೆ ತದ್ವಿರುದ್ಧ ಎಂಬಂತೆ ಭಾರತದಲ್ಲಿ ಪ್ರಿಂಟ್ ಮೀಡಿಯಾಗೆ ಬೇಡಿಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಪ್ರಿಂಟ್...

ಚೆನ್ನೈ: ಜಾಗತಿಕವಾಗಿ ಪ್ರಿಂಟ್ ಮೀಡಿಯಾಗಿಂತ ವೆಬ್ ಮೀಡಿಯಾಗೆ ಹೆಚ್ಚು ಬೇಡಿಕೆ ಉಂಟಾಗುತ್ತಿದೆ. ಆದರೆ ಜಾಗತಿಕ ಟ್ರೆಂಡ್ ಗೆ ತದ್ವಿರುದ್ಧ ಎಂಬಂತೆ ಭಾರತದಲ್ಲಿ ಪ್ರಿಂಟ್ ಮೀಡಿಯಾಗೆ ಬೇಡಿಕೆ ಹೆಚ್ಚುತ್ತಿದ್ದು, ಭಾರತದಲ್ಲಿ ಪ್ರಿಂಟ್ ಮೀಡಿಯಾ ಕಳೆದ 10 ವರ್ಷಗಳಲ್ಲಿ ಶೇ.61 ರಷ್ಟು ಬೆಳವಣಿಗೆ ಸಾಧಿಸಿದೆ. 
ಆಡಿಟ್ ಬ್ಯೂರೊ ಆಫ್ ಸರ್ಕ್ಯುಲೇಷನ್ಸ್ ನ ಅಂಕಿ-ಅಂಶಗಳ ಪ್ರಕಾರ, 2006 ರಲ್ಲಿ 3.91 ಕೋಟಿಯಷ್ಟಿದ್ದ ಪ್ರತಿ ದಿನದ ಪತ್ರಿಕೆಗಳ ಸರಾಸರಿ ಮಾರಾಟ, 2016 ರಲ್ಲಿ 6.28 ಕೋಟಿಗೆ ಏರಿಕೆಯಾಗಿದೆ. ಪ್ರತಿ ಆರು ತಿಂಗಳಿಗೊಮ್ಮೆ ಪತ್ರಿಕೆಗಳ ಮಾರಾಟದ ಬಗ್ಗೆ ಅಂಕಿ-ಅಂಶಗಳನ್ನು ಎಬಿಸಿ ಬಿಡುಗಡೆ ಮಾಡುತ್ತದೆ. ಎಬಿಸಿ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಮುದ್ರಿತ ಪತ್ರಿಕೆಗಳ ಮಾರಾಟ ಅತ್ಯುತ್ತಮವಾಗಿ ಬೆಳವಣಿಗೆಯಾಗುತ್ತಿದ್ದು, ಕಳೆದ 10 ವರ್ಷಗಳಲ್ಲಿ ಸಿಎಜಿಆರ್ ಶೇ.4.87 ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಲಾಗುತ್ತಿದೆ. 
ಪ್ರಸಕ್ತ ಸಾಲಿನಲ್ಲಿ ಸಿಎಜಿಆರ್ ಬೆಳವಣಿಗೆ ಶೇ.7.83 ರಷ್ಟಿದ್ದು, ದಕ್ಷಿಣದಲ್ಲಿ ಶೇ.4.95 ರಷ್ಟಿದೆ. ಪ್ರಾದೇಶಿಕ ಪತ್ರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ದರ ಸಾಧ್ಯವಾಗಿದ್ದು, ಹಿಂದಿ ಮಾಧ್ಯಮಗಳು ಜಿಎಜಿಆರ್ ಶೇ.8.76 ರಷ್ಟು ಬೆಳವಣಿಗೆ ಹೊಂದುವ ಮೂಲಕ ಅಗ್ರಸ್ಥಾನದಲ್ಲಿವೆ. ತೆಲುಗು ಶೇ.8.28 ರಷ್ಟನ್ನು ಹೊಂದಿದ್ದು 2 ನೇ ಸ್ಥಾನದಲ್ಲಿದೆ ಎಂದು ಎಬಿಸಿ ಅಂಕಿ-ಅಂಶ ಹೇಳಿದೆ. 
ಇನ್ನು ಇಂಗ್ಲೀಷ್ ಪತ್ರಿಕೆಗಳು ಶೇ.2.87 ರಷ್ಟು ಬೆಳವಣಿಗೆ ದಾಖಲಿಸಿದರೆ. 2020 ರ ವೇಳೆಗೆ ಟಿವಿ ಮೊದಲ ಸ್ಥಾನದಲ್ಲಿದ್ದರೂ ಪತ್ರಿಕೆಗಳು 2 ನೇ ದೊಡ್ಡ ಸ್ಥಾನದಲ್ಲಿ ಮುಂದುವರೆಯಲಿದ್ದು, 2021 ರ ವೇಳೆಗೆ ಪತ್ರಿಕೆಗಳ ಸಿಎಜಿಆರ್ ಶೇ.7.3 ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಎಬಿಸಿ ಅಂದಾಜಿಸಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT