ದೇಶ

ವಿಡಿಯೋ ಮೂಲಕ ಈದ್ ಶುಭಾಶಯ ಕೋರಿದ ರಾಜನಾಥ ಸಿಂಗ್

Manjula VN
ನವದೆಹಲಿ: ದೇಶದಾದ್ಯಂತ ಈದ್-ಉಲ್-ಫಿತರ್ ಆಚರಣೆ ಮಾಡಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿನ ಹಿಂಸಾಚಾರಕ್ಕೆ ಅಂತ್ಯ ಹಾಡುವಂತೆ ಶಾಂತಿಯುತ ಸಂದೇಶ, ಶುಭಾಶಯವನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಕೋರಿದ್ದಾರೆ. 
ಈದ್ ಹಬ್ಬ ಆಚರಣೆ ಹಿನ್ನಲೆಯಲ್ಲಿ ವಿಡಿಯೋ ಸಂದೇಶವನ್ನು ರವಾನಿಸಿರುವ ರಾಜನಾಥ ಸಿಂಗ್ ಅವರು, ಕಾಶ್ಮೀರದಲ್ಲಿರುವ ಎಲ್ಲಾ ಸಹೋದರರು, ಸಹೋದರಿಯರು, ಹಿರಿಯರು, ಯುವಕರು ಹಾಗೂ ಮಕ್ಕಳಿಗೆ ಈ ಮೂಲಕ ಹೃದಯಪೂರ್ವಕವಾಗಿ ಶುಭಾಶಯಗಳನ್ನು ಕೋರುತ್ತಿದ್ದೇನೆಂದು ಹೇಳಿದ್ದಾರೆ. 
ಈದ್ ಹಬ್ಬ ಕಾಶ್ಮೀರದಲ್ಲಿ ಹೊಸ ಬೆಳಕು ಮೂಡುವಂತೆ ಮಾಡಲಿ. ಹಬ್ಬದ ಮಾನವೀಯಕತೆ ಕಾಶ್ಮೀರದಲ್ಲಿ ಸ್ನೇಹ ಮತ್ತು ಶಾಂತಿಯನ್ನು ಮರುಕಳಿಸುವಂತೆ ಮಾಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದ್ದಾರೆ. 
SCROLL FOR NEXT