ರಾಜ್ ವೀರ್ ದಿಲೇರ್ (ಸಂಗ್ರಹ ಚಿತ್ರ) 
ದೇಶ

ಮನಸಾರೆ ಒಪ್ಪಿ ಅಸ್ಪೃಶ್ಯತೆ ಆಚರಿಸುವ ಉತ್ತರ ಪ್ರದೇಶ ಶಾಸಕ!

ಅಸ್ಪೃಶ್ಯತೆ ಸಾಮಾಜಿಕ ಪಿಡುಗು ಎಂದು ಇಡೀ ದೇಶ ಬೊಬ್ಬೆ ಹೊಡೆಯುತ್ತಿದ್ದರೆ ಅತ್ತ ಉತ್ತರ ಪ್ರದೇಶದ ಜನಪ್ರತಿನಿಧಿಯೊಬ್ಬರು ಅದೇ ಅಸ್ಪೃಶ್ಯತೆ ಮನಸಾರೆ ಒಪ್ಪಿ ಆಚರಿಸುತ್ತಿದ್ದಾರೆ.

ಲಖನೌ: ಅಸ್ಪೃಶ್ಯತೆ ಸಾಮಾಜಿಕ ಪಿಡುಗು ಎಂದು ಇಡೀ ದೇಶ ಬೊಬ್ಬೆ ಹೊಡೆಯುತ್ತಿದ್ದರೆ ಅತ್ತ ಉತ್ತರ ಪ್ರದೇಶದ ಜನಪ್ರತಿನಿಧಿಯೊಬ್ಬರು ಅದೇ ಅಸ್ಪೃಶ್ಯತೆ ಮನಸಾರೆ ಒಪ್ಪಿ ಆಚರಿಸುತ್ತಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದು ಹೋದರು ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಹೇಗೆ ಜೀವಂತವಾಗಿದೆ ಎಂಬುದಕ್ಕೆ ಉತ್ತರ ಪ್ರದೇಶ ಶಾಸಕ ರಾಜ್ ವೀರ್ ದಿಲೇರ್ ಅವರ ನಿದರ್ಶನ. ಕೆಳವರ್ಗಕ್ಕೆ ಸೇರಿದ ರಾಜ್  ವೀರ್ ದಿಲೇರ್ ಉತ್ತರ ಪ್ರದೇಶದ ಶಾಸಕರಾಗಿದ್ದು, ಇಂದಿಗೂ ಅವರು ಮೇಲ್ವರ್ಗದವರ ಮನೆಗೆ ತೆರಳಿದರೆ ಅವರಿಗೆ ಸರಿಸಾನವಾಗಿ ಕೂರುವುದಿಲ್ಲ. ನೆಲದ ಮೇಲೆಯೇ ಕುಳಿತು ಸಮಸ್ಯೆ ಆಲಿಸುತ್ತಾರೆ. ಅಂತೆಯೇ ಅವರು ಸದಾ  ತಮ್ಮೊಂದಿಗೆ ಒಂದು ಪ್ರತ್ಯೇಕ ಲೋಟ ಒಯ್ದು ಅದರಲ್ಲೇ ಚಹಾ ಸೇವನೆ ಮಾಡುತ್ತಾರೆ.

ಇನ್ನು ರಾಜ್ ವೀರ್ ದಿಲೇರ್ ಅವರು ರಾಜಕೀಯಕ್ಕೆ ಹೊಸಬರೇನೂ ಅಲ್ಲ. ಅವರ ತಂದೆ ಕಿಶನ್ ಲಾಲ್ ಅವರೂ ಕೂಡ ಐದು ಬಾರಿ ಶಾಸಕರಾಗಿದ್ದವರು. ಅವರೂ ಕೂಡ ಜನಪ್ರತಿನಿಧಿಯಾಗಿದ್ದ ಸಂದರ್ಭದಲ್ಲಿ ಮೇಲ್ವರ್ಗದವರನ್ನು  ಗೌರವಿಸುತ್ತಿದ್ದರಂತೆ. ಅವರ ಹಾದಿಯನ್ನೇ ರಾಜ್ ವೀರ್ ದಿಲೇರ್ ಅವರೂ ಕೂಡ ಪಾಲಿಸುತ್ತಿದ್ದಾರೆ.

ಇಂತಹ ರಾಜ್ ವೀರ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಜಾಟ್ ಸಮುದಾಯದ ಪ್ರಾಬಲ್ಯವಿರುವ ಅಲಿಘಡ ಜಿಲ್ಲೆಯ ಇಗ್ಲಸ್ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿ ಬಿಎಸ್ ಪಿಯ ರಾಜೇಂದ್ರ ಕುಮಾರ್ ಅವರ ವಿರುದ್ಧ ಸುಮಾರು  75 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT