ದೇಶ

ಪಂಜಾಬ್ ಗಡಿ ನುಸುಳಲು ಯತ್ನ: ಓರ್ವ ಉಗ್ರನನ್ನು ಸದೆಬಡಿದ ಸೇನೆ

Manjula VN
ಅಮೃತಸರ: ಪಂಜಾಬ್ ರಾಜ್ಯದ ಅಂತರಾಷ್ಟ್ರೀಯ ಗಡಿ ನುಸಳಲು ಯತ್ನ ನಡೆಸುತ್ತಿದ್ದ ಓರ್ವ ಶಂಕಿತ ಉಗ್ರನನ್ನು ಭಾರತೀಯ ಸೇನಾ ಪಡೆ ಸೋಮವಾರ ಹತ್ಯೆ ಮಾಡಿದೆ. 
ಗುರ್ದಾಸ್ಪುರದ ಪಹಾರಿಪುರ್ ಅಂತರಾಷ್ಟ್ರೀಯ ಗಡಿ ಭಾಗದಲ್ಲಿ ಗಡಿ ಭದ್ರತಾ ಪಡೆ ಗಸ್ತು ತಿರುಗುತ್ತಿತ್ತು. ಬೆಳಿಗ್ಗೆ 6.30ರ ಸುಮಾರಿಗೆ ಗಡಿಯಲ್ಲಿ ಸಂಶಯಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದು ಕಂಡು ಬಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. 
ಹಲವು ಬಾರಿ ಎಚ್ಚರಿಕೆ ನೀಡಿದರೂ, ಶಂಕಿತ ಉಗ್ರ ಗಡಿ ನುಸುಲುವ ಯತ್ನವನ್ನು ಕೈಬಿಟ್ಟಿರಲಿಲ್ಲ. ಹೀಗಾಗಿ ಸೇನೆ ಹತ್ಯೆ ಮಾಡಿತು ಎಂದು ತಿಳಿಸಿದ್ದಾರೆ. 
ಪ್ರಸ್ತುತ ಆ ಪ್ರದೇಶದ ಸುತ್ತಲೂ ಸೇನಾ ಪಡೆ ಸುತ್ತುವರೆದಿದೆ. ಸ್ಥಳದಲ್ಲಿ ಉಗ್ರರು ಅಡಗಿ ಕುಳಿತಿರುವ ಕುರಿತಂತೆ ಶಂಕೆಗಳು ವ್ಯಕ್ತವಾಗಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ ಎಂದಿದ್ದಾರೆ. 
SCROLL FOR NEXT