ದೇಶ

ಕಾಂಗ್ರೆಸ್ ನಾಯಕನ ಹತ್ಯೆ ಪ್ರಕರಣ: ಅಂಧ್ರ ಪ್ರದೇಶದ ಉಪ ಸ್ಪೀಕರ್ ಪುತ್ರ ಬಂಧನ

Manjula VN
ಗುವಾಹಟಿ: ಕಾಂಗ್ರೆಸ್ ನಾಯಕ ಕೆಂಜುಮ್ ಕಮ್ಸಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣಾಚಲ ಪ್ರದೇಶ ಉಪ ಸ್ಪೀಕರ್ ತುಮ್ಕೆ ಬಗ್ರಾ ಅವರ ಪುತ್ರನನ್ನು ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ. 
ಅರುಣಾಚಲ ಪ್ರದೇಶ ಉಪ ಸ್ಪೀಕರ್ ತುಮ್ಕೆ ಬಾಗ್ರಾ ಅವರ ಪುತ್ರ ಕಜುಮ್ ಬಾಗ್ರ ಆವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ. 
ಕಳೆದ ಭಾನುವಾರ ರಾತ್ರಿ 10ರ ಸುಮಾರಿಗೆ ಹೋಟೆಲ್ ವೊಂದರ ಮುಂಭಾಗದಲ್ಲಿ ಅರುಣಾಚಲ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶ್ರೇಣಿಯ ನಾಯಕ ಕೆಂಜುಮ್ ಕಮ್ಸಿಯವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. 
SCROLL FOR NEXT