ನ್ಯಾಯಾಧೀಶ ಕರ್ಣನ್ 
ದೇಶ

ಆದೇಶದಿಂದ 'ದಲಿತ ನ್ಯಾಯಾಧೀಶನಿಗೆ ಅವಮಾನ': ಸುಪ್ರೀಂ ಆದೇಶ ತಿರಸ್ಕರಿಸಿದ ನ್ಯಾ. ಕರ್ಣನ್

ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ನೀಡಲಾಗಿರುವ ಆದೇಶ ದಲಿತ ನ್ಯಾಯಾಧೀಶರೊಬ್ಬರಿಗೆ ಅವಮಾನ ಮಾಡಿದಂತಾಗಿದೆ ಎಂದು ನ್ಯಾಯಾಧೀಶ ಕರ್ಣನ್ ಅವರು ಸುಪ್ರೀಂಕೋರ್ಟ್ ವಿರುದ್ಧ ಕಿಡಿಕಾರಿದ್ದಾರೆ...

ನವದೆಹಲಿ: ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ನೀಡಲಾಗಿರುವ ಆದೇಶ ದಲಿತ ನ್ಯಾಯಾಧೀಶರೊಬ್ಬರಿಗೆ ಅವಮಾನ ಮಾಡಿದಂತಾಗಿದೆ ಎಂದು ನ್ಯಾಯಾಧೀಶ ಕರ್ಣನ್ ಅವರು ಸುಪ್ರೀಂಕೋರ್ಟ್ ವಿರುದ್ಧ ಕಿಡಿಕಾರಿದ್ದಾರೆ. 
ಮೇ.4 ರಂದು ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ಸುಪ್ರೀಂಕೋರ್ಟ್ ನ ಸಪ್ತಸದಸ್ಯ ಪೀಠದ ಆದೇಶ ಹಾಸ್ಯಾಸ್ಪದ ಹಾಗೂ ಅಪರೂಪವಾಗಿದೆ ಎಂದು ಕರ್ಣನ್ ಕಿಡಿಕಾರಿದ್ದಾರೆ. 
ನಾನೇನು ಮಾನಸಿಕ ಅಸ್ವಸ್ಥನೇ? ನನ್ನ ಮಾನಸಿಕ ಆನಾರೋಗ್ಯ ಅಳೆಯಲು ಸುಪ್ರೀಂಕೋರ್ಟ್ ಯಾರು? ನಾನು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಎಂದು ಕಣ್ನ್ ಸುಪ್ರೀಂ ವಿರುದ್ಧ ಗುಡುಗಿದ್ದಾರೆ. 
ನಾನೊಬ್ಬ ದಲಿತ ಎಂಬ ಕಾರಣಕ್ಕೆ ನನ್ನನ್ನು ಗುರಿ ಮಾಡಲಾಗಿದೆ. ನನ್ನ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಳು ನ್ಯಾಯಾಧೀಶರು ಭ್ರಷ್ಟರು. ಒಂದು ವೇಳೆ, ಪಶ್ಚಿಮ ಬಂಗಾಳ ಡಿಜಿಪಿ ನನ್ನ ಒಪ್ಪಿಗೆ ಪಡೆಯದೇ ಏನಾದರೂ ನಡೆದುಕೊಂಡಿದ್ದೇ ಆದರೆ, ಅವರ ವಿರುದ್ಧ ಆದೇಶ ಹೊರಡಿಸುತ್ತೇನೆಂದು ಹೇಳಿದ್ದಾರೆ. 
ಇದೇ ವೇಳೆ ಸುಪ್ರೀಂಕೋರ್ಟ್ ನ ಎಲ್ಲಾ 7 ನ್ಯಾಯಾಧೀಶರನ್ನೂ ದೆಹಲಿಯ ಏಮ್ಸ್ ಆಸ್ಪತ್ರೆಯ ಮಾನಸಿಕ ವಿಭಾಗದಲ್ಲಿ ತಪಾಸಣೆಗೆ ಒಳಪಡಿಸಬೇಕು ಎಂದು ನಾನು ದೆಹಲಿ ಡಿಜಿಪಿ ಅವರಿಗೆ ಆದೇಶಿಸುತ್ತೇನೆ. ಮೇ.7ರೊಳಗಾಗಿ ಈ ಬಗ್ಗೆ ನನಗೆ ಅವರು ವರದಿ ಸಲ್ಲಿಸಬೇಕು ಎಂದು ಕರ್ಣನ್ ಅವರು ಹೊರಡಸಿದ ಆದೇಶವನ್ನು ಮಾಧ್ಯಮ ಕಚೇರಿಗಳಿಗೆ ತಲುಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT