ನರೇಂದ್ರ ಮೋದಿ 
ದೇಶ

ಲಂಕಾ ತಮಿಳರೊಂದಿಗೆ ಬಾಂಧವ್ಯ ಬೆಸೆಯಲು 'ಚಾಯ್' ಬಳಸಿದ ಪ್ರಧಾನಿ ಮೋದಿ!

ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಲಂಕಾದಲ್ಲಿರುವ ತಮಿಳುನಾಡು ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲಂಕಾ ತಮಿಳರೊಂದಿಗೆ ಬಾಂಧವ್ಯ ಬೆಸೆಯಲು ಚಾಯ್ ಬಳಸಿದ್ದಾರೆ.

ನವದೆಹಲಿ: ಶ್ರೀಲಂಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಲಂಕಾದಲ್ಲಿರುವ ತಮಿಳುನಾಡು ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಲಂಕಾ ತಮಿಳರೊಂದಿಗೆ ಬಾಂಧವ್ಯ ಬೆಸೆಯಲು ಚಾಯ್ ಬಳಸಿದ್ದಾರೆ. 
ಹೌದು ತಮಿಳು ಸಮುದಾಯವನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಹಾಗೂ ಲಂಕಾ ತಮಿಳರ ನಡುವೆ ಇರುವ ಚಾಯ್ ಸಾಮ್ಯತೆಯನ್ನು ಬಳಸಿದ್ದು, "ನೀವು ಹಾಗೂ ನಾನು ಒಂದು ಚಾಯ್ ಸಾಮ್ಯತೆಯನ್ನು ಹೊಂದಿದ್ದೇವೆ. ಚಾಯ್ ನೊಂದಿಗೆ ನಾವಿಬ್ಬರೂ ವಿಶೇಷವಾದ ಸಂಬಂಧವನ್ನು ಹೊಂದಿದ್ದೇವೆ. "2014 ರ ಲೋಕಸಭಾ ಚುನಾವಣೆ ವೇಳೆ ಹಮ್ಮಿಕೊಳ್ಳಲಾಗಿದ್ದ ಚಾಯ್ ಪೇ ಚರ್ಚಾ" ಕಾರ್ಯಕ್ರಮವನ್ನು ನೆನಪಿಸಿಕೊಂಡಿದ್ದು, ಚಾಯ್ ಪೇ ಚರ್ಚಾ ಕೇವಲ ಸ್ಲೋಗನ್ ಅಲ್ಲ, ಅದು ಆಳವಾದ ಗೌರವದ ಪ್ರತೀಕ ಎಂದು ಹೇಳಿದ್ದಾರೆ. 
ಶ್ರೀಲಂಕಾದಲ್ಲಿ ಬೆಳೆಯುವ ಸಿಲೋನ್ ಟೀ (ಚಾಯ್) ಬಗ್ಗೆ ವಿಶ್ವದ ಜನತೆಗೆ ಪರಿಚಿತ ಚಾಯ್ ಬ್ರಾಂಡ್ ಆಗಿದೆ. ಟೀ ರಫ್ತಿನಲ್ಲಿ ಶ್ರೀಲಂಕಾ 3ನೇ ಸ್ಥಾನದಲ್ಲಿದ್ದರೆ ಅದು ನಿಮ್ಮ ಕಠಿಣ ಪರಿಶ್ರಮದಿಂದ ಎಂದು ಮೋದಿ ಲಂಕಾದ ತಮಿಳರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತಮಿಳು ಐಕಾನ್ ಗಳಾದ ಎಂಜಿಆರ್ ಹಾಗೂ ಮುತ್ತಯ್ಯ ಮುರಳೀಧರನ್ ಅವರ ಬಗ್ಗೆಯೂ ಮಾತನಾಡಿರುವ ಮೋದಿ, ಶ್ರೀಲಂಕಾದಲ್ಲಿ ಹುಟ್ಟಿದ್ದ ಎಂಜಿಆರ್ ತಮಿಳುನಾಡಿನೊಂದಿಗೆ ಜೀವನ ಪರ್ಯಂತ ಬಾಂಧವ್ಯ ಹೊಂದಿದ್ದರು. ಅಂತೆಯೇ ನೀವು ಮುತ್ತಯ್ಯ ಮುರಳೀಧರನ್ ಎಂಬ ಜಗದ್ವಿಖ್ಯಾತ ಸ್ಪಿನ್ನರ್ ನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದೀರ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ದುರಂತ: ಮೃತರ ಸಂಖ್ಯೆ 7ಕ್ಕೆ ಏರಿಕೆ; ತಲೆಮರೆಸಿಕೊಂಡಿರುವ PG ಮಾಲೀಕನ ವಿರುದ್ಧ Lookout Notice ಜಾರಿ, ಇಂದು High courtನಲ್ಲಿ ತುರ್ತು ವಿಚಾರಣೆ..!

‘ಓವರ್‌ಟೇಕ್‌ ಎಡವಟ್ಟು, ಮೂರೇ ಸೆಕೆಂಡ್ ನಲ್ಲಿ ದುರಂತ!’; ಮಂಡ್ಯದಲ್ಲಿ ಭೀಕರ ಕಾರು ಅಪಘಾತ: ಮಹಿಳೆ ಸಾವು, Video Viral

ಬಿಜೆಪಿಯವರು 'ಹಣ ಕೊಟ್ಟು ಪಾದಯಾತ್ರೆ' ನಡೆಸ್ತಾ ಇದ್ದಾರೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ! Video

Devi Awards 2026: ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ನೋಡುವ ಬದಲು ಅಭಿವೃದ್ಧಿಯ ಪಾಲುದಾರರು, ನಾಯಕಿಯರನ್ನಾಗಿ ಪರಿಗಣಿಸಬೇಕು- ಒಡಿಶಾ ಡಿಸಿಎಂ

West asia conflict: ಬೆದರಿಕೆಗೆ ಮಣಿಯಲ್ಲ, ದಾಳಿ ನಿಲ್ಲದ ಹೊರತು ಹಾರ್ಮುಜ್ ಜಲಸಂಧಿ ತೆರೆಯಲ್ಲ: ಅಮೆರಿಕಾಕ್ಕೆ Iran ಖಡಕ್ ಸಂದೇಶ..!