ಹರಿಯಾಣ: ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಪತ್ತೆ 
ದೇಶ

ಹರಿಯಾಣ: ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಪತ್ತೆ

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಊಟದ ಗುಣಮಟ್ಟದ ಸಂದೇಹಗಳು ಮೂಡುತ್ತಿರುವ ಬೆನ್ನಲ್ಲೇ ಇದಕ್ಕೆ ಪೂರಕವೆಂಬಂತೆ ಹರಿಯಾಣ ರಾಜ್ಯದ ಫರೀದಾಬಾದ್'ನ ಸರ್ಕಾರಿ ಶಾಲೆಯೊಂದರ ಮಧ್ಯಾಹ್ನದ...

ಫರೀದಾಬಾದ್: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಊಟದ ಗುಣಮಟ್ಟದ ಸಂದೇಹಗಳು ಮೂಡುತ್ತಿರುವ ಬೆನ್ನಲ್ಲೇ ಇದಕ್ಕೆ ಪೂರಕವೆಂಬಂತೆ ಹರಿಯಾಣ ರಾಜ್ಯದ ಫರೀದಾಬಾದ್'ನ ಸರ್ಕಾರಿ ಶಾಲೆಯೊಂದರ ಮಧ್ಯಾಹ್ನದ ಊಟದಲ್ಲಿ ಸತ್ತ ಹಾವೊಂದು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 
ಫರೀದಾಬಾದ್ ನ ಸರ್ಕಾರಿ ರಾಜಕೀಯ ಗರ್ಲ್ಸ್ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ನೀಡಲಾಗುತ್ತಿದ್ದ ಮಧ್ಯಾಹ್ನದ ಊಟದಲ್ಲಿ ಉದ್ದನೆಯ ಸತ್ತ ಮರಿ ಹಾವೊಂದು ಕಂಡು ಬಂದಿದೆ. 
ಊಟದಲ್ಲಿ ಹಾವು ಕಂಡು ಬರುತ್ತಿದ್ದಂತೆಯೇ ಮಕ್ಕಳು ಊಟ ಸೇವಿಸುವುದನ್ನು ಕೂಡಲೇ ನಿಲ್ಲಿಸಲಾಗಿದೆ. ಆದರೆ, ದುರಾದೃಷ್ಟವಶಾತ್ ಕೆಲ ಮಕ್ಕಳು ಆಹಾರವನ್ನು ಸೇವಿಸಿ ಬಿಟ್ಟಿದ್ದರು. ಊಟ ಸೇವಿಸಿದ ಕೆಲ ನಿಮಿಷಗಳಲ್ಲೇ ಕೆಲ ಮಕ್ಕಳಿಕೆ ವಾಂತಿ ಉಂಟಾಗಿ ಅಸ್ವಸ್ಥರಾಗಿದರು. 
ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರು ಮಕ್ಕಳಿಗೆ ಊಟ ಬಡಿಸುವುದಕ್ಕೂ ಮುನ್ನ ಅದರ ರುಚಿಯನ್ನು ಪರೀಕ್ಷಿಸಲು ಸ್ವಲ್ಪ ಪ್ರಮಾಣದ ಆಹಾರವನ್ನು ಹಾಕಿಕೊಂಡಿದ್ದರು. ಈ ವೇಳೆ ಆಹಾರದಲ್ಲಿ ಸತ್ತ ಹಾವಿನ ಮರಿ ಇರುವುದು ಕಂಡುಬಂದಿದೆ. ಕೂಡಲೇ ಅವರು ಮಕ್ಕಳು ಆಹಾರ ಸೇವಿಸದಂತೆ ಸೂಚಿಸಿದ್ದರು. 
ಮಧ್ಯಾಹ್ನದ ಊಟದಲ್ಲಿ ಸತ್ತ ಹಾವು ಇರುವ ಸುದ್ದಿ ಕೇಳಿದೊಡನೆಯೇ ಆಘಾತವಾಯಿತು. ನಮಗೆ ಮೊದಲೇ ಆಹಾರದಿಂದ ಕೆಟ್ಟ ಹಾಗೂ ವಿಚಿತ್ರವಾದ ವಾಸನೆ ಬರುತ್ತಿತ್ತು. ಆಹಾರದಲ್ಲಿ ಏನೋ ಆಗಿದೆ ಎಂದು ತಿಳಿದಿದ್ದೆವು. ಅಷ್ಟರಲ್ಲಾಗಲೇ ಆಹಾರದಲ್ಲಿ ಸತ್ತ ಮರಿ ಹಾವು ಇದೆ, ಯಾರೂ ಊಟ ಸೇವಿಸಬಾರದು ಎಂಬ ಸೂಚನೆ ಬಂದು ಇದನ್ನು ಕೇಳಿ ಬಹಳ ಭಯವಾಯಿತು ಎಂದು ಶಾಲಾ ಮಕ್ಕಳು ಹೇಳಿಕೊಂಡಿದ್ದಾರೆ. 
ಆಹಾರದಲ್ಲಿ ಹಾವು ಕಂಡು ಬರುತ್ತಿದ್ದಂತೆಯೇ ಶಾಲೆಯ ಪ್ರಾಂಶುಪಾಲರಾದ ಬೃಜ್ ಬಾಲಾ ಅವರು ಹಿರಿಯ ಆಧಿಕಾರಿಗಳಿಗೆ ಹಾಗೂ ಶಾಲೆಗೆ ಮಧ್ಯಾಹ್ನದ ಊಟ ಪೂರೈಸುವ ಇಸ್ಕಾನ್ ಫುಡ್ ರಿಲೀಫ್ ಫೌಂಡೇಶನ್'ಗೆ ಮಾಹಿತಿ ನೀಡಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT