ಸಂಗ್ರಹ ಚಿತ್ರ 
ದೇಶ

ತಲೆ ಕತ್ತರಿಸಿ ಲಾಲ್ ಚೌಕ್ ನಲ್ಲಿ ನೇತು ಹಾಕುತ್ತೇವೆ: ಪ್ರತ್ಯೇಕತಾವಾದಿಗಳಿಗೆ ಹಿಜ್ಬುಲ್ ಮುಜಾಹಿದ್ದೀನ್ ಎಚ್ಚರಿಕೆ

ಇಸ್ಲಾಂಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮಧ್ಯೆ ಪ್ರವೇಶ ಮಾಡಿದರೆ, ತಲೆ ಕತ್ತರಿಸಿ ಲಾಲ್ ಚೌಕ್ ನಲ್ಲಿ ನೇತು ಹಾಕಿಬಿಡುತ್ತೇವೆಂದು ಪ್ರತ್ಯೇಕತಾವಾದಿಗಳಿಗೆ ಹಿಜ್ಬುಲ್ ಮುಜಾಹಿದ್ದೀನ್...

ಶ್ರೀನಗರ: ಇಸ್ಲಾಂಗಾಗಿ ನಡೆಯುತ್ತಿರುವ ನಮ್ಮ ಹೋರಾಟದಲ್ಲಿ ಮಧ್ಯೆ ಪ್ರವೇಶ ಮಾಡಿದರೆ, ತಲೆ ಕತ್ತರಿಸಿ ಲಾಲ್ ಚೌಕ್ ನಲ್ಲಿ ನೇತು ಹಾಕಿಬಿಡುತ್ತೇವೆಂದು ಪ್ರತ್ಯೇಕತಾವಾದಿಗಳಿಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಶನಿವಾರ ಎಚ್ಚರಿಕೆ ನೀಡಿದೆ. 

ಹುರಿಯತ್ ನಾಯಕರಿಗೆ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಯಕ ಝಾಕಿನ್ ಮುಸಾ ಬೆದರಿಕೆ ಹಾಕಿರುವ ಆಡಿಯೋ ಕ್ಲಿಪ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ಆಡಿಯೋ ಕ್ಲಿಪ್ ನಲ್ಲಿ ಝಾಕೀನ್ ಮುಸಾ ಪ್ರತ್ಯೇಕತಾವಾದಿಗಳಿಗೆ ಬೆದರಿಕೆ ಹಾಕಿದ್ದಾನೆ. ಕಪಟವೇಷದಾರಿ ಹುರಿಯತ್ ನಾಯಕರಿಗೆ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ. ಇಸ್ಲಾಂ ಕುರಿತಂತೆ ನಮ್ಮ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ಪ್ರತ್ಯೇಕತಾವಾದಿಗಳು ಮಧ್ಯೆ ಪ್ರವೇಶ ಮಾಡಬಾರದು. ಮಾಡಿದ್ದೇ ಆದರೆ, ಅವರ ತಲೆಗಳನ್ನು ಕಡಿದು ಲಾಲ್ ಚೌಕ್ ನಲ್ಲಿ ನೇತು ಹಾಕುತ್ತೇವೆಂದು ಹೇಳಿದ್ದಾನೆ. 

ಕಾಶ್ಮೀರದಲ್ಲಿ ಷರಿಯತ್ ಹೇರುವುದು ನಮ್ಮ ಹೋರಾಟದ ಉದ್ದೇಶವಾಗಿದೆಯೇ ಹೊರತು ಕಾಶ್ಮೀರದ ರಾಜಕೀಯ ತಿಕ್ಕಾಟದ ಸಮಸ್ಯೆ ಬಗೆಹರಿಸುವುದಕ್ಕಾಗಿ ಅಲ್ಲ. ನಮ್ಮ ಹೋರಾಟ ಇಸ್ಲಾಂ ಹಾಗೂ ಷರಿಯತ್ ಗಾಗಿ ಎಂಬುದನ್ನು ಪ್ರತ್ಯೇಕತಾವಾದಿಗಳು ತಿಳಿಯಬೇಕಿದೆ ಎಂದು ತಿಳಿಸಿದ್ದಾನೆ. 

ಕಪಟವೇಷಧಾರಿ ಹುರಿಯತ್ ನಾಯಕರ ವಿರುದ್ಧ ಕಾಶ್ಮೀರ ಜನತೆ ಒಗ್ಗೂಡಬೇಕಿದೆ. ನಾವು ನಮ್ಮ ಧರ್ಮವನ್ನು ಪ್ರೀತಿಸಬೇಕು ಹಾಗೂ ನಮ್ಮ ಹೋರಾಟ ಇಸ್ಲಾಂಗಾಗಿ ಎಂಬುದು ಮನಗಾಣಬೇಕಿದೆ. ಇದನ್ನು ಹುರಿಯತ್ ನಾಯಕರು ಚಿಂತಿಸುತ್ತಿಲ್ಲ ಎಂದಾದರೆ, ಆಜಾದಿಯ ಅರ್ಥವೇನು.... ಲಾ ಇಲಾಹ ಇಲ್ ಅಲ್ಲಾ ಎಂಬ ಘೋಷಣೆಗಳನ್ನು ನಾವೇಕೆ ಕೇಳುತ್ತಿದ್ದೇವೆ? ಪ್ರತ್ಯೇಕತಾವಾದಿಗಳೇಕೆ ತಮ್ಮ ರಾಜಕೀಯಕ್ಕೆ ನಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾನೆ. ಆದರೆ, ಈ ಆಡಿಯೋ ಕ್ಲಿಪ್ ಕುರಿತ ದೃಢೀಕರಣ ಈ ವರೆಗೂ ಸ್ಪಷ್ಟವಾಗಿಲ್ಲ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT