ರಜನಿಕಾಂತ್, ಬಲ ಚಿತ್ರದಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ 
ದೇಶ

ರಜನಿಕಾಂತ್ ನಟರಾಗಿಯೇ ಉಳಿಯಬೇಕು; ರಾಜಕೀಯ ಅವರಿಗೆ ಸರಿ ಹೊಂದದು: ಸುಬ್ರಹ್ಮಣ್ಯನ್ ಸ್ವಾಮಿ

ತಮಿಳುನಾಡಿನ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅಲ್ಲಿಗೆ ಅವಿದ್ಯಾವಂತ ಅಭ್ಯರ್ಥಿಗಳ...

ನವದೆಹಲಿ: ತಮಿಳುನಾಡಿನ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಅಲ್ಲಿಗೆ ಅವಿದ್ಯಾವಂತ ಅಭ್ಯರ್ಥಿಗಳ ಅವಶ್ಯಕತೆಯಿಲ್ಲ ಎಂದು ಭಾರತೀಯ ಜನತಾ ಪಾರ್ಟಿಯ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಸೇರುವ ಸಾಧ್ಯತೆಗೆ ಸಂಬಂಧಪಟ್ಟಂತೆ ಅವರು ಈ ರೀತಿ ನುಡಿದಿದ್ದಾರೆ.
ತಮಿಳುನಾಡಿನ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ರಜನಿಕಾಂತ್ ಅವರು ಯೋಗ್ಯರಾಗುವುದಿಲ್ಲ. ಅವರಿಗೆ ಸಂವಿಧಾನ, ಮೂಲಭೂತ ಹಕ್ಕುಗಳು ಇತ್ಯಾದಿ ವಿಷಯಗಳ ಕುರಿತು ಆಲೋಚನೆಗಳಿಲ್ಲ. ಅವರು ಸಂಭಾಷಣೆಗಳನ್ನು ಚೆನ್ನಾಗಿ ಒಪ್ಪಿಸಿ ಮನರಂಜನೆ ನೀಡಲು ಸಾಧ್ಯವಾಗುವುದರಿಂದ ಸಿನಿಮಾಕ್ಕೆ ಸೀಮಿತವಾಗುವುದು ಸೂಕ್ತ ಎಂದು ಹೇಳಿದರು.
ಸಿನಿಮಾ ಸ್ಟಾರ್ ಗಳು ರಾಜಕೀಯ ಪ್ರವೇಶಿಸುವುದನ್ನು ಕೂಡ ವಿರೋಧಿಸುವ ಸುಬ್ರಹ್ಮಣ್ಯನ್ ಸ್ವಾಮಿ, ಈ ಹಿಂದೆ ರಾಜಕೀಯ ಸೇರಿದ ಸಿನಿಮಾ ಸ್ಟಾರ್ ಗಳಿಂದಾಗಿ ರಾಜ್ಯದ ಪ್ರಗತಿ ಕುಂಠಿತಗೊಂಡಿದೆ ಎಂದರು.
ಸಿನಿಮಾ ನಟ, ನಟಿಯರು ರಾಜಕೀಯಕ್ಕೆ ಸೇರಿದರೆ ಇಡೀ ವ್ಯವಸ್ಥೆ ನಾಶವಾಗಿ ಪ್ರಗತಿ ಕುಂಠಿತಗೊಳ್ಳುತ್ತದೆ.  ಕಾಮರಾಜ್ ಅವರು ರಾಜಕೀಯಕ್ಕೆ ಸೇರಿ ತಳಹದಿಯನ್ನೇ ಹಾಳು ಮಾಡಿದರು ಎಂದರು. 
ರಜನಿಕಾಂತ್ ಅವರು ಯಾವುದಾದರೊಂದು ಪಕ್ಷಕ್ಕೆ ಸೇರುತ್ತಾರೆ ಎಂಬ ಮಾಧ್ಯಮ ವರದಿಯನ್ನು ಸುಬ್ರಹ್ಮಣ್ಯ ಸ್ವಾಮಿ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'Gaza deal ಒಪ್ಕೊಳ್ಳಿ.. ಇಲ್ಲ ನರಕ ತೋರಿಸ್ತೀವಿ': Hamas ಗೆ ಡೊನಾಲ್ಡ್ ಟ್ರಂಪ್ ಅಂತಿಮ ಎಚ್ಚರಿಕೆ!

2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬೇಡಿ: 11 ಮಕ್ಕಳ ಸಾವಿನ ನಂತರ ಕೇಂದ್ರ ಎಚ್ಚರಿಕೆ

ಖ್ಯಾತ ಹಿರಿಯ ಪತ್ರಕರ್ತ, ಲೇಖಕ ಟಿಜೆಎಸ್ ಜಾರ್ಜ್ ನಿಧನ

ಕರೂರ್ ಕಾಲ್ತುಳಿತ ತನಿಖೆಗೆ SIT ರಚನೆ: ಸ್ಥಳದಿಂದ ಓಡಿ ಹೋದ ವಿಜಯ್​​ಗೆ ಮದ್ರಾಸ್ ಹೈಕೋರ್ಟ್ ತರಾಟೆ

'ಭೌಗೋಳಿಕ ನಕ್ಷೆಯಲ್ಲಿ ಕೂಡ ಇರದಂತೆ ಅಳಿಸಿ ಹಾಕುತ್ತೇವೆ': ಬಾಲ ಬಿಚ್ಚಿದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ದ್ವಿವೇದಿ ಎಚ್ಚರಿಕೆ! Video

SCROLL FOR NEXT