ಮೇಜರ್ ಲೀತುಲ್ ಗೊಗೊಯ್ 
ದೇಶ

ಕಲ್ಲು ತೂರಾಟಗಾರರ ನಾಯಕನನ್ನು ಜೀಪಿಗೆ ಕಟ್ಟಿ ಹಲವು ಜನರ ಪ್ರಾಣ ಉಳಿಸಿದೆ: ಮೇಜರ್ ಗೊಗೊಯ್

ಕಲ್ಲು ತೂರಾಟಗಾರರ ನಾಯಕನನ್ನು ಜೀಪಿಗೆ ಕಟ್ಟಿ ಮೆರವಣಿಗೆ ಮಾಡುವ ಮೂಲಕ ಹಲವು ಜನರ ಪ್ರಾಣ ಉಳಿಸಿದ್ದೇನೆ ಎಂದು ಮೇಜರ್....

ಶ್ರೀನಗರ: ಕಲ್ಲು ತೂರಾಟಗಾರರ ನಾಯಕನನ್ನು ಜೀಪಿಗೆ ಕಟ್ಟಿ ಮೆರವಣಿಗೆ ಮಾಡುವ ಮೂಲಕ ಹಲವು ಜನರ ಪ್ರಾಣ ಉಳಿಸಿದ್ದೇನೆ ಎಂದು ಮೇಜರ್ ಲೀತುಲ್ ಗೊಗೊಯ್ ಅವರು ಮಂಗಳವಾರ ಹೇಳಿದ್ದಾರೆ.
ಕಾಶ್ಮೀರದ ಯುವಕರು ಕಲ್ಲು ತೂರುವುದನ್ನು ತಡೆಯುವುದಕ್ಕಾಗಿ ಯುವಕನ್ನು ಸೇನೆಯ ಜೀಪಿನ ಮುಂಭಾಗಕ್ಕೆ ಕಟ್ಟಿ ಆತನನ್ನು ಮಾನವ ಗುರಾಣಿಯಂತೆ ಬಳಸಿದ ಮೇಜರ್ ಗೊಗೊಯ್ ಅವರು ಘಟನೆ ಕುರಿತು ಇದೇ ಮೊದಲ ಬಾರಿಗೆ ಮಾಧ್ಯಮದೊಂದಿಗೆ ಮಾತನಾಡಿದ್ದು, ನಾನು ಮತ್ತು ಇತರೆ ನಾಲ್ವರು ಸೇನಾ ಸಿಬ್ಬಂದಿ ಮತಗಟ್ಟೆಯ ಭದ್ರತೆ ಪರಿಶೀಲಿಸು ಹೋಗಿದ್ದೇವೆ. ಈ ವೇಳೆ ಕೆಲವು ಯುವಕರು ನಮ್ಮ ಮೇಲೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಎಸೆಯಲು ಆರಂಭಿಸಿದರು. ಸ್ಥಳೀಯರ ಹಾಗೂ ನಮ್ಮ ಪ್ರಾಣ ರಕ್ಷಣೆಗಾಗಿ ನಾನು ಈ ರೀತಿ ಮಾಡಿದೆ ಎಂದು ಹೇಳಿದ್ದಾರೆ.
ಶಾಂತಿಯುತವಾಗಿ ಚುನಾವಣೆ ನಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಮತಗಟ್ಟೆ ಮೇಲೆ ಕಲ್ಲು ಹಾಗೂ ಪೆಟ್ರೋಲ್ ಬಾಂಬ್ ಎಸೆದು ಶಾಂತಿ ಕದಡಲು ಯತ್ನಿಸುತ್ತಿದ್ದ ಕಲ್ಲು ತೂರಾಟಗಾರರ ರಿಂಗ್ ಲೀಡರ್ ಫಾರೂಖ್ ಅಹ್ಮದ್ ನನ್ನು ಹಿಡಿದು ಜೀಪ್ ಕಟ್ಟಲಾಯಿತು. ನಮ್ಮ ಈ ಯೋಚನೆಯಿಂದ ಹಲವು ಜನರ ಜೀವ ಉಳಿದಿದೆ ಎಂದು ಮೇಜರ್ ತಿಳಿಸಿದ್ದಾರೆ.
ಇದೇ ವೇಳೆ ಇಂಡೊ-ಟಿಬೆಟಿನ್ ಬಾರ್ಡರ್ ಪೊಲೀಸರು ಬಂಡಿಪೋರಾದಲ್ಲಿ ಸುಮಾರು 400-500 ಜನ ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ನೀಡದರು. ನಾನು ಕೂಡಲೇ ಆ ಸ್ಥಳಕ್ಕೆ ತೆರಳಿ 30 ನಿಮಿಷದಲ್ಲೇ ಪರಿಸ್ಥಿತಿಯನ್ನು ನಿಯಂತ್ರಿಸಿದೆ ಎಂದು ಲೀತುಲ್ ಗೊಗೊಯ್ ಅವರು ಹೇಳಿಕೊಂಡಿದ್ದಾರೆ.
ಯುವಕನೊಬ್ಬನನ್ನು ಜೀಪ್‌ಗೆ ಕಟ್ಟಿದ್ದ ಸೇನಾಧಿಕಾರಿ ಮೇಜರ್‌ ಲೀತುಲ್‌ ಗೊಗೊಯ್‌ ಅವರಿಗೆ ಸೇನಾ ಮುಖ್ಯಸ್ಥರ ‘ಮೆಚ್ಚುಗೆ ಪತ್ರ’ನೀಡಲಾಗಿದೆ. ಆದರೆ ಯುವಕನ್ನು ಜೀಪಿಗೆ ಕಟ್ಟಿದ ಕಾರ್ಯಕ್ಕಾಗಿ ಗೊಗೊಯಿ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿಲ್ಲ. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ  ನಿರಂತರವಾಗಿ ಅವರು ತೊಡಗಿಸಿಕೊಂಡ ಕಾರಣಕ್ಕೆ ಆ ಗೌರವವನ್ನು ನೀಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT