ಸಾಂದರ್ಭಿಕ ಚಿತ್ರ 
ದೇಶ

ಪ್ರವೇಶ ಪತ್ರದಲ್ಲಿ ಅಸ್ಪಷ್ಟ ಫೋಟೋವೆ?: ಆಧಾರ್ ಕಾರ್ಡಿನಂತಹ ಗುರುತು ಚೀಟಿ ತನ್ನಿ

ಜೂನ್ 18ರಂದು ನಡೆಯಲಿರುವ ಯುಪಿಎಸ್ ಸಿ(ಕೇಂದ್ರ ಲೋಕಸೇವಾ ಆಯೋಗ) ಪ್ರಾಥಮಿಕ ಹಂತದ...

ನವದೆಹಲಿ: ಜೂನ್ 18ರಂದು ನಡೆಯಲಿರುವ ಯುಪಿಎಸ್ ಸಿ(ಕೇಂದ್ರ ಲೋಕಸೇವಾ ಆಯೋಗ) ಪ್ರಾಥಮಿಕ ಹಂತದ ಪರೀಕ್ಷೆಗೆ ತಮ್ಮ ಪ್ರವೇಶ ಪತ್ರದಲ್ಲಿ ಫೋಟೋ ಸರಿಯಾಗಿ ಕಾಣಿಸದಿದ್ದರೆ ಅಥವಾ ಅಸ್ಪಷ್ಟವಾಗಿದ್ದರೆ ಆಧಾರ್ ಕಾರ್ಡ್ ಅಥವಾ ಬೇರೆ ಗುರುತು ಚೀಟಿ ಪ್ರತಿಯನ್ನು ತರಬೇಕೆಂದು ನಿಯಮ ರೂಪಿಸಲಾಗಿದೆ.
ಪರೀಕ್ಷಾಕಾಂಕ್ಷಿಗಳಿಗೆ ಹೊರಡಿಸಿದ ಸೂಚನೆಯಂತೆ ಇ-ಪ್ರವೇಶ ಪತ್ರದಲ್ಲಿ ಕಡಿಮೆ ಗುಣಮಟ್ಟದ ಭಾವಚಿತ್ರವಿದ್ದರೆ ಅಥವಾ ಫೋಟೋ ಸ್ಪಷ್ಟವಾಗಿ ಕಾಣಿಸದಿದ್ದರೆ ಗುರುತು ಚೀಟಿಗಾಗಿ ಆಧಾರ್ ಕಾರ್ಡು, ಚಾಲನಾ ಪರವಾನಗಿ, ಪಾಸ್ ಪೋರ್ಟ್ ಅಥವಾ ಮತದಾನ ಗುರುತು ಪತ್ರವನ್ನು ಎರಡು ಪಾಸ್ ಪೋರ್ಟ್ ಸೈಜ್ ಫೋಟೋದೊಂದಿದೆ ಪರೀಕ್ಷೆಗೆ ಅಭ್ಯರ್ಥಿಗಳು ಹಾಜರಾಗಬೇಕೆಂದು ಸೂಚಿಸಲಾಗಿದೆ. 
ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಯುಪಿಎಸ್ಸಿಯ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ನೀಡಿರುವ ಆಧಾರ್ ಕಾರ್ಡಿನಲ್ಲಿ 12 ಸಂಖ್ಯೆ ವಿಶಿಷ್ಟ ಗುರುತು ಸಂಖ್ಯೆಗಳಿದ್ದು ಇದು ಅಭ್ಯರ್ಥಿಯ ಗುರುತು ಮತ್ತು ವಾಸಸ್ಥಳವನ್ನು ಸಾಕ್ಷಿಯನ್ನಾಗಿ ಪರಿಗಣಿಸುತ್ತದೆ.
ಪರೀಕ್ಷೆ ನಡೆಯುವ ಕೊಠಡಿಯೊಳಗೆ ಮೊಬೈಲ್ ಫೋನ್, ಕಾಲ್ಕ್ಯುಲೇಟರ್, ಐಟಿ ಗ್ಯಾಜೆಟ್ಸ್ ಮತ್ತು ಇತರ ಸಂವಹನ ಸಾಧನಗಳನ್ನು ತೆಗೆದುಕೊಂಡು ಹೋಗುವ ಹಾಗಿಲ್ಲ. ಅಭ್ಯರ್ಥಿಗಳು ತೆಗೆದುಕೊಂಡು ಹೋಗಿರುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT