ಮನೆಗಾಗಿ ಹಾತೊರೆಯುತ್ತಿರುವ ಚೋಟು ರೌಟೀಯಾ 
ದೇಶ

ಸರ್ಕಾರದಿಂದ ಮನೆ ನಿರಾಕರಣೆ, ಶೌಚಾಲಯವನ್ನೇ ಮನೆ ಮಾಡಿಕೊಂಡ ಒಡಿಶಾದ ವ್ಯಕ್ತಿ!

ಸರ್ಕಾರದ ಯೋಜನೆ ಅನ್ವಯ ಸೂರು ಕೇಳಿದ್ದ ವ್ಯಕ್ತಿ ಇದೀಗ ತನ್ನ ಶೌಚಾಲಯವನ್ನೇ ಮನೆ ಮಾಡಿಕೊಂಡು ಜೀವಿಸುತ್ತಿರುವ ಸುದ್ದಿ ಒಡಿಶಾದಿಂದ ಕೇಳಿಬಂದಿದೆ.

ಭುವನೇಶ್ವರ: ಸರ್ಕಾರದ ಯೋಜನೆ ಅನ್ವಯ ಸೂರು ಕೇಳಿದ್ದ ವ್ಯಕ್ತಿ ಇದೀಗ ತನ್ನ ಶೌಚಾಲಯವನ್ನೇ ಮನೆ ಮಾಡಿಕೊಂಡು ಜೀವಿಸುತ್ತಿರುವ ಸುದ್ದಿ ಒಡಿಶಾದಿಂದ ಕೇಳಿಬಂದಿದೆ.
ಒಡಿಶಾದ ಜಲಾಡದ ಚೋಟು ರೌಟಿಯಾ ಎಂಬಾತ ತನಗೆ ಸರ್ಕಾರ ಕಟ್ಟಿಸಿಕೊಟ್ಟ ಶೌಚಾಲಯವನ್ನೇ ಮನೆಯನ್ನಾಗಿಸಿಕೊಂಡು ಜೀವಿಸುತ್ತಿದ್ದು, ಸರ್ಕಾರ ನೀಡಿದ ಶೌಚಾಲಯದ ಹೊರತಾಗಿಯೂ ಶೌಚಕ್ಕಾಗಿ ಮತ್ತೆ ಬಯಲನ್ನೇ  ಆಶ್ರಯಿಸಿದ್ದಾನೆ. ಮೂಲಗಳ ಪ್ರಕಾರ ಚೋಟು ರೌಟೀಯಾ ರೂರ್ಕೆಲಾ ಉಕ್ಕಿನ ಕೇಂದ್ರ ನಿರ್ಮಾಣದ ಸಮಯದಲ್ಲಿ ತಮ್ಮ ತಂದೆ ಕಟ್ಟಿಸಿಕೊಟ್ಟಿದ್ದ ಸ್ವಂತ ಮನೆಯನ್ನು ಕಳೆದುಕೊಂಡಿದ್ದರು. ಹೀಗಾಗಿ ಸ್ವಂತ ಮನೆಗಾಗಿ ಪ್ರಧಾನ  ಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಹಾಕಿದ್ದರು. 
ಅದರಂತೆ ಹಲವು ಸ್ಥಳೀಯ ಮುಖಂಡರನ್ನು, ಅಧಿಕಾರಿಗಳನ್ನು ಭೇಟಿಯಾಗಿ ಮನೆಗಾಗಿ ಮನವಿ ಮಾಡಿಕೊಂದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಇವರ ಸಮಸ್ಯೆಯನ್ನು ಆಲಿಸಿದ್ದ ಸ್ಥಳೀಯ ಅಧಿಕಾರಿಗಳು  ಇವರ ಸಮಸ್ಯೆ ಪರಿಶೀಲಿಸಿದ್ದರಾದರೂ ಅವರಿಗೆ ಆವಾಸ್​ ಯೋಜನೆ ಅಡಿಯಲ್ಲಿ ಮನೆ ನೀಡುವ ಅಧಿಕಾರ ಇರಲಿಲ್ಲ. ಹೀಗಾಗಿ ಚೋಟು ರೌಟೀಯಾ ಅವರಿಗೆ ಸ್ವಚ್ಛಭಾರತ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ.  ಶೌಚಾಲಯವೇ ಮನೆಯಾದ ಕಾರಣ ರೌಟೀಯಾ ಶೌಚಕ್ಕಾಗಿ ಮತ್ತೆ ಬಯಲನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ.
50 ವರ್ಷದ ಚೋಟು ರೌಟೀಯಾ ಅವರ ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚೋಟು ರೌಟೀಯಾ ಅವರಿಗೆ ಮನೆ ನಿರ್ಮಿಸಿಕೊಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ