ಸಂಗ್ರಹ ಚಿತ್ರ 
ದೇಶ

ಕೇವಲ 48 ಗಂಟೆಗಳ ಅವಧಿಯಲ್ಲಿ 3 ಘೇಂಡಾಮೃಗಗಳ ಭೇಟೆ!

ಅಸ್ಸಾಂ ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯ ಪ್ರದೇಶದಲ್ಲಿ ಕೇವಲ 48 ಗಂಟೆಗಳ ಅವಧಿಯಲ್ಲಿ ಮೂರು ಘೇಂಡಾಮೃಗಗಳ ಭೇಟೆಗಾರರ ಗುಂಡಿಗೆ ಬಲಿಯಾಗಿವೆ.

ನವದೆಹಲಿ: ಅಸ್ಸಾಂ ಕಾಜಿರಂಗ ರಾಷ್ಟ್ರೀಯ ಅಭಯಾರಣ್ಯ ಪ್ರದೇಶದಲ್ಲಿ ಕೇವಲ 48 ಗಂಟೆಗಳ ಅವಧಿಯಲ್ಲಿ ಮೂರು ಘೇಂಡಾಮೃಗಗಳ ಭೇಟೆಗಾರರ ಗುಂಡಿಗೆ ಬಲಿಯಾಗಿವೆ.
ಮೂಲಗಳ ಪ್ರಕಾರ ವಿಶ್ವ ಪಾರಂಪರಿಕ ಪ್ರದೇಶ ಕೂಡ ಆಗಿರುವ ಕಾಜಿರಂಗ ಅರಣ್ಯ ಪ್ರದೇಶದಲ್ಲಿ ಕೇವಲ 48 ಗಂಟೆಗಳ ಅವಧಿಯಲ್ಲಿ ಮೂರು ಘೇಂಡಾಮೃಗಗಳನ್ನು ಬೇಟೆಗಾರರು ಹೊಡೆದು ಕೊಂದು ಹಾಕಿದ್ದಾರೆ. ಮೇಲ್ನೋಟಕ್ಕೆ  ಘೇಂಡಾಮೃಗಗಳ ಕೊಂಬಿಗಾಗಿ ಭೇಟಿಗಾರರು ಈ ರೈನೋಗಳನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. 
ಶನಿವಾರ ತಡರಾತ್ರಿಯಲ್ಲಿ ಕಾಜಿರಂಗ ಅಭಯಾರಣ್ಯ ಪ್ರದೇಶದಲ್ಲಿದ್ದ ಒಂದು ಹೆಣ್ಣು ಘೇಂಡಾ ಮೃಗ ಮತ್ತು ಅದರ ಮರಿಯನ್ನು ಕೊಂದು ಹಾಕಲಾಗಿದೆ. ಭೇಟೆಗಾರರು ರೈನೋಗಳನ್ನು ಕೊಲ್ಲಲು ಅತ್ಯಾಧುನಿಕ ಎಕೆ ಸರಣಿಯ  ಬಂದೂಕನ್ನು ಬಳಕೆ ಮಾಡಿದ್ದಾರೆ. ಕಾಜಿರಂಗ ಅರಣ್ಯಪ್ರದೇಶದ ಬುರ್ರಾಪಹಾರ್ ಪ್ರಾಂತ್ಯದ ಟುನಿಕಟಿ ಭೇಟೆ ನಿಷೇಧ ಪ್ರದೇಶದ ವ್ಯಾಪ್ತಿಯಲ್ಲಿ ರೈನೋಗಳ ಕಳೇಬರ ದೊರೆತಿದೆ. ಆದರೆ ಅವುಗಳ ಕೊಂಬುಗಳು ಮಾತ್ರ  ಕಾಣೆಯಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT