ಸಾಂದರ್ಭಿಕ ಚಿತ್ರ 
ದೇಶ

ಪ್ಯಾರಡೈಸ್‌ ಪೇಪರ್ಸ್‌ ಲೀಕ್: ಬಹು ಸಂಸ್ಥೆಗಳಿಂದ ತನಿಖೆ

ತೆರಿಗೆ ವಂಚಿಸಿ ವಿದೇಶಗಳಲ್ಲಿ ಬೃಹತ್ ರಹಸ್ಯ ಸಂಪತ್ತು ಹೊಂದಿರುವವರ ಪಟ್ಟಿಯನ್ನು 'ಪ್ಯಾರಡೈಸ್ ಪೇಪರ್ಸ್' ಭಾನುವಾರ ಬಿಡುಗಡೆ ಮಾಡಿದ್ದು,....

ನವದೆಹಲಿ: ತೆರಿಗೆ ವಂಚಿಸಿ ವಿದೇಶಗಳಲ್ಲಿ ಬೃಹತ್ ರಹಸ್ಯ ಸಂಪತ್ತು ಹೊಂದಿರುವವರ ಪಟ್ಟಿಯನ್ನು 'ಪ್ಯಾರಡೈಸ್ ಪೇಪರ್ಸ್' ಭಾನುವಾರ ಬಿಡುಗಡೆ ಮಾಡಿದ್ದು, ಈ ಕುರಿತು ಬಹು ಸಂಸ್ಥೆಗಳ ತಂಡ(ಎಂಎಜಿ) ತನಿಖೆ ನಡೆಸಲು ಮುಂದಾಗಿದೆ.
ಪನಾಮಾ ಪೇಪರ್ ಹಗರಣದ ಬಳಿಕ ಮತ್ತೊಂದು ಬೃಹತ್ ತೆರಿಗೆ ವಂಚನೆ ಹಗರಣ ಈಗ ಬೆಳಕಿಗೆ ಬಂದಿದ್ದು, ಪನಾಮಾ ಪೇಪರ್ಸ್‌ ಲೀಕ್‌ ಆದ ಸಂದರ್ಭದಲ್ಲಿ ತನಿಖೆ ನಡೆಸಲು ರಚನೆಯಾಗಿದ್ದ ಹಲವು ಸಂಸ್ಥೆಗಳೇ ಈಗ ತನಿಖೆ ನಡೆಸಲು ಮತ್ತೆ ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ಬಹು ಸಂಸ್ಥೆಯಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯದ ಹಾಗೂ ಆರ್ಥಿಕ ಗುಪ್ತಚರ ಇಲಾಖೆ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕ್‌ ಅಧಿಕಾರಿಗಳು ಇರುತ್ತಾರೆ.
ಈ ಸಂಸ್ಥೆಯು ಮೊದಲಿಗೆ ಕಂಪನಿಗಳ ಆದಾಯ ತೆರಿಗೆ ಸಲ್ಲಿಕೆಯ ಮಾಹಿತಿಯನ್ನು ಪರಿಶೀಲಿಸಲಿದೆ. ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಯಾರಡೈಸ್‌ ಪೇಪರ್ಸ್‌ ಪಟ್ಟಿಯಲ್ಲಿ ಕೇಂದ್ರ ಸರ್ಕಾರದ ಇಬ್ಬರು ಸಚಿವರು ಸೇರಿದಂತೆ  ಪಟ್ಟಿಯಲ್ಲಿ ಸುಮಾರು 715ಕ್ಕೂ ಅಧಿಕ ಮಂದಿ ಭಾರತೀಯ ಹೆಸರು ಇದೆ ಎಂದು ಹೇಳಲಾಗುತ್ತಿದೆ.
ಖ್ಯಾತ ಆಂಗ್ಲ ದೈನಿಕವೊಂದು ವರದಿ ಮಾಡಿರುವಂತೆ, ಅಮೆರಿಕ ಮೂಲದ ಇಂಟರ್ ನ್ಯಾಷನಲ್ ಕನ್ಸಾರ್ಟಿಯಂ ಆಫ್ ಜರ್ನಲಿಸ್ಟ್ಸ್ ತಂಡ, "ಪ್ಯಾರಡೈಸ್ ಪೇಪರ್ಸ್" ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಿದ ಹಲವು ದಾಖಲೆಗಳು ವಿಶ್ವದ ಹೆಸರಾಂತ ಕಂಪೆನಿಗಳ ಅವ್ಯವಹಾರವನ್ನು ಬಯಲಿಗೆಳೆದಿವೆ. ವಾಣಿಜ್ಯ ಕಂಪನಿಗಳು ಮಾತ್ರವಲ್ಲದೇ ರಾಜಕೀಯ, ಕಿರುತೆರೆ, ಬೆಳ್ಳೆತೆರೆ ಮನರಂಜನಾ ಕ್ಷೇತ್ರದ ಹಲವು ಖ್ಯಾತನಾಮರ ಹೆಸರುಗಳು ಕೂಡ ಈ ಪಟ್ಟಿಯಲ್ಲಿ ಇದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT