ರಾಹುಲ್ ಗಾಂಧಿ 
ದೇಶ

ಸೂರತ್ ಗೆ ಬಂದ ರಾಹುಲ್ ಗಾಂಧಿಗೆ ಮೋದಿ, ಮೋದಿ ಉದ್ಘಾರದೊಂದಿಗೆ ವ್ಯಾಪಾರಿಗಳ ಸ್ವಾಗತ

ನೋಟುಗಳ ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿ ಗುಜರಾತ್ ನ ....

ಸೂರತ್: ನೋಟುಗಳ ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿ ಗುಜರಾತ್ ನ ಸೂರತ್  ವ್ಯಾಪಾರಿಗಳನ್ನು ದಿಕ್ಕು ಕಾಣದಂತೆ ಮಾಡಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ದೇಶದ ಬಟ್ಟೆ ಮತ್ತು ವಜ್ರ ವ್ಯಾಪಾರ ಕೇಂದ್ರವಾದ ಸೂರತ್ ನಲ್ಲಿ ನಿನ್ನೆ ಕರಾಳ ದಿನವನ್ನು ಆಚರಿಸಿದ ಸಂದರ್ಭದಲ್ಲಿ ಕೈಗಾರಿಕಾ ಪ್ರತಿನಿಧಿಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೇಶದ ಆರ್ಥಿಕತೆ ಮೇಲೆ ಸರ್ಕಾರ ವರ್ಷದ ಹಿಂದೆ ದಾಳಿ ನಡೆಸಿತು. ಸೂರತ್ ವ್ಯಾಪಾರಿಗಳನ್ನು ಜಿಎಸ್ ಟಿ ಮತ್ತು ನೋಟುಗಳ ಅಮಾನ್ಯೀಕರಣ ದಿಕ್ಕೆಡಿಸಿದೆ.ಕೈಗಾರಿಕೆಗಳು ಆರ್ಥಿಕತೆ ಮೇಲೆ ಎರಡು ಮುಖ್ಯ ನಿರ್ಧಾರಗಳಿಂದ ನಲುಗಿ ಹೋಗಿದೆ. ಜನರ ಬದುಕಿಗೆ ಕಷ್ಟವಾಗಿದೆ ಎಂದು ಜನರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅರಿವಿಗೆ ಬಂದಿದೆ ಎಂದು ಹೇಳಿದರು.
ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸ್ಪರ್ಧೆಯಲ್ಲ, ಬದಲಿಗೆ ಇಡೀ ಭಾರತಕ್ಕೆ ಸಂಬಂಧಪಟ್ಟ ವಿಷಯವಾಗಿದೆ ಎಂದರು.
ಈ ಮಧ್ಯೆ ರಾಹುಲ್ ಗಾಂಧಿಯವರು ಕಟಗ್ರಮ್ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ನಿರ್ಮಾಣ್ ಇಂಡಸ್ಟ್ರಿಗೆ ಬರುತ್ತಿದ್ದ ವೇಳೆ ಅಲ್ಲಿನ ವ್ಯಾಪಾರಿಗಳು ಮೋದಿ ಮೋದಿ ಎಂದು ಕೂಗುತ್ತಿದ್ದ ವಿಡಿಯೊವನ್ನು ದೆಹಲಿಯ ಬಿಜೆಪಿ ವಕ್ತಾರರು ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ರಾಹುಲ್ ಗಾಂಧಿಯವರು ಸುಳ್ಳು ಹೇಳುವುದನ್ನು ಮತ್ತು ಹಗಲು ಕನಸು ಕಾಣುವುದನ್ನು ನಿಲ್ಲಿಸಬೇಕೆಂದು ಭಾರತೀಯ ಜನತಾ ಪಾರ್ಟಿ ರಾಹುಲ್ ಗಾಂಧಿಯವರಿಗೆ ಸಲಹೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT