ಜಾವೇದ್ ಅಖ್ತರ್ 
ದೇಶ

ರಾಜಕಾರಣಿಗಳು ದೇಶಕ್ಕಿಂತ ದೊಡ್ಡವರಲ್ಲ: ಜಾವೇದ್ ಅಖ್ತರ್

ಬೇರೆಯವರನ್ನು ರಾಷ್ಟ್ರವಿರೋಧಿಗಳೆಂದು ಹೇಳುವವರು ಹಾಗೂ ಅವರ ರಾಜಕೀಯ ಪಕ್ಷಗಳು ತಾವು ದೇಶಕ್ಕಿಂತ ದೊಡ್ಡವರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಖ್ಯಾತ ಚಿತ್ರಸಂಗೀತ ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದಾರೆ.

ನವದೆಹಲಿ: ಬೇರೆಯವರನ್ನು ರಾಷ್ಟ್ರವಿರೋಧಿಗಳೆಂದು ಹೇಳುವವರು ಹಾಗೂ ಅವರ ರಾಜಕೀಯ ಪಕ್ಷಗಳು ತಾವು ದೇಶಕ್ಕಿಂತ ದೊಡ್ಡವರಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದು ಖ್ಯಾತ ಚಿತ್ರಸಂಗೀತ ಸಾಹಿತಿ ಜಾವೇದ್ ಅಖ್ತರ್ ಹೇಳಿದ್ದಾರೆ. 
ಸಾಹಿತ್ಯ ಆಜ್ ತಕ್ ಸಮಾವೇಶದಲ್ಲಿ ಭಾಗವಹಿಸಿ ರಾಷ್ಟ್ರವಿರೋಧಿ ಮನಸ್ಥಿತಿಯ ಬಗ್ಗೆ ಮಾತನಾಡಿರುವ ಜಾವೇದ್ ಅಖ್ತರ್, ರಾಷ್ಟ್ರಪ್ರೇಮವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ತಮ್ಮನ್ನೇ ರಾಷ್ಟ್ರ ಎಂದು ಭಾವಿಸಲು ಪ್ರಾರಂಭಿಸಿದ್ದಾರೆ, ಒಂದು ವೇಳೆ ಅದನ್ನು ವಿರೋಧಿಸಿದರೆ ನೀವು ರಾಷ್ಟ್ರವಿರೋಧಿಗಳಾಗುತ್ತೀರಿ. ರಾಜಕಾರಣಿಗಳು ರಾಷ್ಟ್ರಕ್ಕಿಂತ ದೊಡ್ಡವರಲ್ಲ, ಯಾವುದೇ ವ್ಯಕ್ತಿ ಅಥವಾ ರಾಜಕೀಯ ಪಕ್ಷಗಳು ತಾವು ರಾಷ್ಟ್ರಕ್ಕಿಂತ ದೊಡ್ಡವರೆಂದುಕೊಂಡರೆ ಅದು ತಪ್ಪು ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. 
ಇದೇ ವೇಳೆ ಮುಸ್ಲಿಮರ ಬಗ್ಗೆಯೂ ಮಾತನಾಡಿರುವ ಜಾವೇದ್ ಅಖ್ತರ್, ಓರ್ವ ಜಾತ್ಯಾತೀತ ಮುಸಲ್ಮಾನ ಎಂದಿಗೂ ಎಲ್ಲಿಯೂ ಸಲ್ಲುವುದಿಲ್ಲ. ಮುಸ್ಲಿಮರು ಭಾರತೀಯರಲ್ಲ ಎಂದು ಪರಿಗಣಿಸುವುದು ದೃರದೃಷ್ಟಕರ ಟಿಪ್ಪು ಸುಲ್ತಾನ್ ಓರ್ವ ಹಿಂದೂಸ್ಥಾನಿಯಲ್ಲ, ಇದನ್ನು ಒಪ್ಪದೇ ಇದ್ದರೆ ನಾನು ರಾಷ್ಟ್ರವಿರೋಧಿಯಾಗುತ್ತೇನೆಯೇ? ಒಂದು ವೇಳೆ ಒಪ್ಪದೇ ಇರುವುದರಿಂದ ನಾನು ರಾಷ್ಟ್ರವಿರೋಧಿಯೆಂಬುದಾದರೆ, ನಾನು ರಾಷ್ಟ್ರವಿರೋಧಿಯೇ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT