ಬಿಹಾರ ಶೌಚಾಲಯ ಹಗರಣದಲ್ಲಿ ಮತ್ತೆರಡು ಎನ್ ಜಿಒ ಗಳು ಶಾಮೀಲು! 
ದೇಶ

ಬಿಹಾರ ಶೌಚಾಲಯ ಹಗರಣದಲ್ಲಿ ಮತ್ತೆರಡು ಎನ್ ಜಿಒ ಗಳು ಶಾಮೀಲು!

15 ಕೋಟಿ ಮೊತ್ತದ ಶೌಚಾಲಯ ನಿರ್ಮಾಣ ಹಗರಣದಲ್ಲಿ ಇನ್ನೂ ಎರಡು ಎನ್ ಜಿಒ ಗಳು ಶಾಮೀಲಾಗಿರುವುದನ್ನು ವಿಶೇಷ ತನಿಖಾ ದಳ ಪತ್ತೆ ಮಾಡಿದೆ.

ಪಾಟ್ನ: 15 ಕೋಟಿ ಮೊತ್ತದ ಶೌಚಾಲಯ ನಿರ್ಮಾಣ ಹಗರಣದಲ್ಲಿ ಇನ್ನೂ ಎರಡು ಎನ್ ಜಿಒ ಗಳು ಶಾಮೀಲಾಗಿರುವುದನ್ನು ವಿಶೇಷ ತನಿಖಾ ದಳ ಪತ್ತೆ ಮಾಡಿದೆ. 
ಕೇವಲ ಪಾಟ್ನಾದಲ್ಲಷ್ಟೇ ಅಲ್ಲದೇ ಇನ್ನೂ ಎರಡು ಜಿಲ್ಲೆಗಳಲ್ಲಿ ಈ ಹಗರಣ ನಡೆದಿರುವ ಸಾಧ್ಯತೆಗಳನ್ನು ಎಸ್ ಐಟಿ ಶಂಕಿಸಿದೆ. ಆರ್ಯಭಟ್ ವಿಕಾಸ್ ಸೇವಾ ಸಂಸ್ಥಾನ್ ಹಾಗೂ ಬುದ್ಧ ಉತ್ಥಾನ್ ಗ್ರಾಮೀಣ್ ಸಮಿತಿ ಪರಿವರ್ತನ ಸಂಸ್ಥಾನ ಎಂಬ ಎನ್ ಜಿಒ ಗಳು ಹಗರಣದಲ್ಲಿ ಶಾಮೀಲಾಗಿದೆ ಎಂದು ಎಸ್ ಐ ಟಿ ತಿಳಿಸಿದೆ. 
ಬ್ಯಾಂಕ್ ನ ಹಲವು ಅಧಿಕಾರಿಗಳ ತಂತ್ರದಿಂದಾಗಿ ಹಗರಣ ನಡೆದಿದ್ದು, ಈ ವರೆಗೂ ಹಗರಣದಲ್ಲಿ ಒಟ್ಟು 6 ಎನ್ ಜಿಒ ಗಳು ಶಾಮೀಲಾಗಿ ಶೌಚಾಲಯ ನಿರ್ಮಾಣಕ್ಕಾಗಿ ಮೀಸಲಾಗಿದ್ದ ಸರ್ಕಾರಿ ಅನುದಾನವನ್ನು ಕಬಳಿಸಿರುವುದು ಬೆಳಕಿಗೆ ಬಂದಿದೆ. 
ಎನ್ ಜಿಒ ಗಳು ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಎನ್ ಜಿಒ ಗಳ ಬ್ಯಾಂಕ್ ಖಾತೆಯಲ್ಲಿ ಯಾವುದೇ ವಹಿವಾಟು ನಡೆಯದಂತೆ ಎಚ್ಚರ ವಹಿಸಲು ಎಸ್ಐಟಿ ಸೂಚನೆ ನೀಡಿದೆ. ಪಾಟ್ನಾದ ಮಾದರಿಯಲ್ಲೇ ಭೋಜ್ ಪುರದಲ್ಲಿಯೂ ಹಗರಣ ನಡೆದಿರುವ ಸಾಧ್ಯತೆಗಳು ಕಂಡುಬಂದಿದ್ದು, ಎಸ್ಐಟಿ ತಂಡ ತನಿಖೆಯನ್ನು ಮುಂದುವರೆಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT