ಥಾಮಸ್ ಚಾಂಡಿ 
ದೇಶ

ಕೇರಳ ಸರ್ಕಾರದ 3ನೇ ವಿಕೆಟ್ ಪತನ: ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜಿನಾಮೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ಮೂರನೇ ವಿಕೆಟ್ ಪತನವಾಗಿದ್ದು ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜಿನಾಮೆ ನೀಡಿದ್ದಾರೆ...

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರದ ಮೂರನೇ ವಿಕೆಟ್ ಪತನವಾಗಿದ್ದು ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜಿನಾಮೆ ನೀಡಿದ್ದಾರೆ. 
ಕೇರಳ ಹೈರ್ಕೋಟ್ ಸಹ ಥಾಮಸ್ ಚಾಂಡಿ ವಿರುದ್ಧ ನಿನ್ನೆ ಕಿಡಿಕಾರಿತ್ತು. ಈ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಪಿಣರಾಯಿ ಅವರ ಜತೆ 40 ನಿಮಿಷಗಳ ಕಾಲ ಚರ್ಚೆ ನಡೆಸಿದ ಬಳಿಕ ಸಾರಿಗೆ ಸಚಿವ ಸ್ಥಾನಕ್ಕೆ ಥಾಮಸ್ ಚಾಂಡಿ ರಾಜಿನಾಮೆ ನೀಡಿದ್ದಾರೆ. ಇದರೊಂದಿಗೆ ಕಳೆದ ಒಂದು ವರ್ಷದಲ್ಲಿ ಪಿಣರಾಯಿ ವಿಜಯನ್ ಸರ್ಕಾರದ ಮೂವರು ಸಚಿವರು ರಾಜಿನಾಮೆ ನೀಡಿದ್ದಂತಾಗಿದೆ. 
ಥಾಮಸ್ ಚಾಂಡಿ ಅವರು ಆಲಪ್ಪುಯ ಜಿಲ್ಲೆಯ ಮಾರ್ತಾಂಡಂ ಸರೋವರ ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರು. ಈ ಬಗ್ಗೆ ರಾಜ್ಯ ಸರ್ಕಾರವು ವರದಿ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಆದೇಶ ನೀಡಿತ್ತು. ಜಿಲ್ಲಾಧಿಕಾರಿ ಸಲ್ಲಿಸಿದ್ದ ವರದಿಯಲ್ಲಿ ಥಾಮಸ್ ಚಾಂಡಿ ಒತ್ತುವರಿ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿತ್ತು. 
ಪಿಣರಾಯಿ ಸರ್ಕಾರದ ಸಚಿವರಾಗಿದ್ದ ಜಯರಾಜನ್ ಸಂಬಂಧಿಕರಿಗೆ ಸರ್ಕಾರಿ ಹುದ್ದೆ ನೀಡಿದ ಆರೋಪದ ಮೇಲೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ನಂತರ ಲೈಂಗಿಕ ಹಗರಣದಲ್ಲಿ ಎನ್ಸಿಪಿಯ ಎಕೆ ಶಶೀಂದ್ರನ್ ರಾಜಿನಾಮೆ ನೀಡಿದ್ದರು. ಶಶೀಂದ್ರರು ರಾಜಿನಾಮೆ ನೀಡಿದ ಹುದ್ದೆಗೆ ಅದೇ ಪಕ್ಷದ ಥಾಮಸ್ ಚಾಂಡಿ ಸಚಿವರಾಗಿ ಸೇರ್ಪಡೆಗೊಂಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT